Sunil Kumar Karkala

4.1K posts

Sunil Kumar Karkala banner
Sunil Kumar Karkala

Sunil Kumar Karkala

@karkalasunil

MLA-KARKALA, State General Secretary- BJP Karnataka, Former Minister- Govt of Karnataka, NATIONALIST.

Karnataka Katılım Mayıs 2011
95 Takip Edilen55.6K Takipçiler
Sunil Kumar Karkala
Sunil Kumar Karkala@karkalasunil·
ಹಿಂದುಳಿದ ವರ್ಗದ ನಾಯಕರಿಗೆ ಕಾಂಗ್ರೆಸ್ ಮತ್ತೊಮ್ಮೆ ಐತಿಹಾಸಿಕ ದ್ರೋಹ ಬಗೆದಿದೆ. ಅಂದು ದೇವರಾಜ್ ಅರಸು ಅವರನ್ನು ಹೀನಾಯವಾಗಿ ಪಟ್ಟದಿಂದ ಇಳಿಸಿದ ರೀತಿಯಲ್ಲಿ ಇಂದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸುವ ಮೂಲಕ ಓಬಿಸಿ ಸಮುದಾಯದ ರಾಜಕೀಯ ಉತ್ಕರ್ಷವನ್ನು ಕಾಂಗ್ರೆಸ್ ಹೈಕಮಾಂಡ್ ಸಹಿಸುವುದಿಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಊಳುವವನೇ ಹೊಲದೊಡೆಯ ಕಾಯ್ದೆ ಜಾರಿ ಸೇರಿದಂತೆ ಕರ್ನಾಟಕದಲ್ಲಿ ಕ್ರಾಂತಿಕಾರಿ ಆಡಳಿತ ನೀಡುವ ಮೂಲಕ ಅರಸು ಜನಮನ್ನಣೆ ಗಳಿಸಿದ್ದರು. ಆದರೆ ಅವರ ಜನಪ್ರಿಯತೆಯನ್ನು ಸಹಿಸದ ಇಂದಿರಾ ಗಾಂಧಿ ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಅರಸು ನಂತರ ಕರ್ನಾಟಕ ಹಾಗೂ ರಾಷ್ಟ್ರ ಮಟ್ಟದ ಜನಪ್ರಿಯ ಓಬಿಸಿ ನಾಯಕರಾಗಿದ್ದ @siddaramaiah ಅವರನ್ನು ಈಗ ರಾಹುಲ್ ಗಾಂಧಿ ಪದಚ್ಯುತಿಗೊಳಿಸಿದ್ದಾರೆ. ನೂಲಿನಂತೆ ಸೀರೆ ಎಂಬಂತೆ‌ ಗಾಂಧಿ ಕುಟುಂಬದ ಡಿಎನ್ ಎಯಲ್ಲೇ ಓಬಿಸಿ ನಾಯಕರ ಬಗ್ಗೆ ದ್ವೇಷ, ಈರ್ಷೆ ಹಾಗೂ ಅಸಹನೆ ಅಡಗಿದೆ. ಒಂದೆಡೆ ತಾನು ಓಬಿಸಿ ಸಮುದಾಯದ ಧ್ವನಿಯನ್ನು ಆಲಿಸುವುದಕ್ಕೆ ವಿಳಂಬ ಮಾಡಿದೆ, ಜಾತಿ ಗಣತಿ ನಡೆಸಿ ಓಬಿಸಿ ಸಮುದಾಯಕ್ಕೆ ನ್ಯಾಯ ಕೊಡುತ್ತೇನೆಂದು ವೇದಿಕೆಯಲ್ಲಿ ರಾಜಕೀಯ ಭಾಷಣ ಮಾಡುವ ರಾಹುಲ್ ಗಾಂಧಿ ಇನ್ನೊಂದೆಡೆ ಓಬಿಸಿ ಸಮುದಾಯದ ರಾಜಕೀಯ ನಾಯಕರನ್ನು ಅಧಿಕಾರದಿಂದ ಎಳೆದು ಕೆಡವುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದ್ದ ಒಬ್ಬನೇ ಒಬ್ಬ ಓಬಿಸಿ ಮುಖ್ಯಮಂತ್ರಿಯನ್ನು ಯಾಕೆ ಪದಚ್ಯುತಿಗೊಳಿಸಿದಿರಿ ? ಎಂಬ ಪ್ರಶ್ನೆಗೆ @RahulGandhi ಉತ್ತರಿಸಬೇಕಾಗುತ್ತದೆ.
ಕನ್ನಡ
28
23
151
16.3K
Sunil Kumar Karkala
Sunil Kumar Karkala@karkalasunil·
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಮತ್ತೆ ಮುರಿದು ಬಿದ್ದಿದೆ.‌ ಜಿಹಾದಿ ಚಟುವಟಿಕೆಯ ಅಡ್ಡೆಯಾಗಿರುವ ಭಟ್ಕಳದಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಮೂರಿನ್ ಕಟ್ಟೆಯಲ್ಲಿ ಮುಸ್ಲಿಂ ಸಂಘಟನೆಗಳು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ಹಾಗೂ ದಾಂಧಲೆ ನಡೆಸುವುದು ಅವ್ಯಾಹತವಾಗಿದೆ. ಇಂಥ ಬಂಡುಕೋರರ ಹುಟ್ಟಡಗಿಸಬೇಕಿದ್ದ ಕಾಂಗ್ರೆಸ್ ಸರ್ಕಾರ ಅಂಥವರ ವಿರುದ್ಧದ ಪ್ರಕರಣ ವಾಪಾಸ್ ಪಡೆದುಕೊಳ್ಳುತ್ತಿದೆ. ಪೊಲೀಸ್ ವ್ಯವಸ್ಥೆಯನ್ನು ಮುಸ್ಲಿಂ ಗೂಂಡಾಗಳ ಪದತಲದಲ್ಲಿ ಅಡವಿಟ್ಟರೆ ಭಟ್ಕಳ್ ಮತ್ತೆ ಉಗ್ರರ ಅಡ್ಡೆಯಾಗುವುದರಲ್ಲಿ ಸಂಶಯ ಬೇಡ. @siddaramaiah @INCKarnataka
ಕನ್ನಡ
3
3
30
1.5K
Sunil Kumar Karkala
Sunil Kumar Karkala@karkalasunil·
ಯುವ ನಾಯಕರು, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ನಾಯಕತ್ವದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಲಿ, ದೇಶಸೇವೆಯ ಪಥದಲ್ಲಿ ಇನ್ನಷ್ಟು ಯಶಸ್ಸುಗಳು ದೊರಕಲಿ. @NitinNabin
Sunil Kumar Karkala tweet media
ಕನ್ನಡ
1
0
7
412
Sunil Kumar Karkala
Sunil Kumar Karkala@karkalasunil·
“ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026” ಅಂಗವಾಗಿ ನಡೆದ ಭಾಜಪ ಬೆಂಗಳೂರು ಉತ್ತರ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ರಾಜ್ಯ ಸಕಾ೯ರದ ವೈಫಲ್ಯ ಕುರಿತು ಅವಧಿ ತೆಗೆದುಕೊಳ್ಳಲಾಯಿತು. ಭಾರತೀಯ ಜನತಾ ಪಕ್ಷದ ಸಿದ್ಧಾಂತ, ಸಂಘಟನೆ ಹಾಗೂ ರಾಷ್ಟ್ರಸೇವೆಯ ವಿಚಾರಗಳನ್ನು ತಳಮಟ್ಟದ ಕಾರ್ಯಕರ್ತರಿಗೆ ತಲುಪಿಸುವಲ್ಲಿ ಇಂತಹ ಪ್ರಶಿಕ್ಷಣ ವರ್ಗಗಳು ಮಹತ್ವದ ಪಾತ್ರವಹಿಸುತ್ತವೆ. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಎಸ್. ಹರೀಶ್ ಪ್ರಮುಖ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Sunil Kumar Karkala tweet mediaSunil Kumar Karkala tweet mediaSunil Kumar Karkala tweet mediaSunil Kumar Karkala tweet media
ಕನ್ನಡ
0
0
6
202
Sunil Kumar Karkala
Sunil Kumar Karkala@karkalasunil·
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಶ್ರೀ ನಿತಿನ್ ನಬಿನ್ ಜಿ ಅವರಿಗೆ ಹೃತ್ಪೂರ್ವಕ ಸ್ವಾಗತ
Sunil Kumar Karkala tweet media
ಕನ್ನಡ
1
2
10
214
Sunil Kumar Karkala retweetledi
Narendra Modi
Narendra Modi@narendramodi·
Best wishes to Shri HD Deve Gowda Ji on his birthday. He has made an outstanding contribution to our nation during his long years in public life. He is known for his deep understanding of policy-related issues and passion towards serving the marginalised. Praying for his long and healthy life. @H_D_Devegowda
English
418
2K
18.8K
8.1M
Sunil Kumar Karkala
Sunil Kumar Karkala@karkalasunil·
ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ ನೀತಿಯನ್ನು ಬಹಿರಂಗವಾಗಿ ಪ್ರಕಟಗೊಳಿಸಿದೆ. 2022ರಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೆ ತಂದಿತ್ತು. ಈ ವಿಚಾರ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲೇ ಸರ್ಕಾರ ಆದೇಶವನ್ನು ವಾಪಾಸ್ ಪಡೆದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ನ್ಯಾಯಾಂಗ ನಿಂದನೆಯೂ ಹೌದು. ದಾವಣಗೆರೆ ಉಪ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಗೆ ಕೊಟ್ಟ ಕಪಾಳಮೋಕ್ಷದ ನೋವನ್ನು ಮರೆಯುವುದಕ್ಕಾಗಿ @siddaramaiah ಸರ್ಕಾರ ಈಗ ಒಂದಾದ ಮೇಲ್ಲೊಂದರಂತೆ ಮುಸ್ಲಿಂ ತುಷ್ಟೀಕರಣ ನಡೆಸುತ್ತಿದೆ. ಕಳೆದ ಬಾರಿ ಕ್ಯಾಬಿನೆಟ್ ಸಭೆಯಲ್ಲಿ ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಕೊಡಲಾಗಿತ್ತು. ಅದರ ಬೆನ್ನಲ್ಲೇ ಈಗ ಹಿಜಾಬ್ ಗೆ ಅವಕಾಶ. ತನ್ನ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವುದಕ್ಕಾಗಿ ದೇಶದ ಸಮಗ್ರತೆ ಹಾಗೂ ಸಂವಿಧಾನವನ್ನು ಒತ್ತೆ ಇಡುವುದಕ್ಕೆ ಹೇಸದ ಕಾಂಗ್ರೆಸಿರಿಗೆ ಈಗ ಮತ್ತೆ ಹಿಜಾಬ್ ಧ್ಯಾನ ಶುರುವಾಗಿದೆ. ಈ ಆದೇಶ ಎಷ್ಟು ಗೊಂದಲ ಗೂಡಾಗಿದೆಯೆಂದರೆ ಸಮವಸ್ತ್ರದ ಮೂಲ ಉದ್ದೇಶವನ್ನು ಬದಲಾಯಿಸಬಾರದು ಅಥವಾ ಹಾಳು ಮಾಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಹಿಜಾಬ್ ಧರಿಸಿದರೆ ಸಮವಸ್ತ್ರದ ಮೂಲ ಕಲ್ಪನೆಯೇ ವ್ಯತ್ಯಾಸವಾಗುತ್ತದೆ. ಒಟ್ಟಾರೆಯಾಗಿ ಈ ಸರ್ಕಾರಕ್ಕೊಂದು ಶೈಕ್ಷಣಿಕ ಧೋರಣೆಯೇ ಇಲ್ಲ. ಸಾಮಾಜಿಕ ಸಾಮರಸ್ಯವನ್ನು‌ ಕದಡುವ ವಿಷ ಕಕ್ಕುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ. ಇಂಥ ಓಲೈಕೆ ರಾಜಕಾರಣದಿಂದ ದೇಶಾದ್ಯಂತ " ಕಸ"ವಾಗಿರುವ ಕಾಂಗ್ರೆಸ್ ಸದ್ಯದಲ್ಲಿ ರಾಜ್ಯದಲ್ಲೂ ಮೂಲೆಗೆ ಸೇರುವ ದಿ‌ನಗಣನೆ ಈ ಆದೇಶದೊಂದಿಗೆ ಪ್ರಾರಂಭವಾಗಿದೆ‌. ಅತಿಯಾದ ಓಲೈಕೆ ಮಾಡಿದಕ್ಕಾಗಿ ಪಶ್ಚಿಮ‌ ಬಂಗಾಲ ಹಾಗೂ ಇತರೆ ರಾಜ್ಯಗಳಲ್ಲಿ ಕತೆ ಏನಾಗಿದೆ ಎಂಬುದನ್ನು ಕಾಂಗ್ರೆಸ್ ಮರೆಯದಿರಲಿ. @INCKarnataka
ಕನ್ನಡ
0
1
12
517
Sunil Kumar Karkala
Sunil Kumar Karkala@karkalasunil·
1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಜನರಿಗೆ ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದಾಗ ಕಾಂಗ್ರೆಸ್‌ ಅದನ್ನು ರಾಷ್ಟ್ರೀಯ ಶಿಸ್ತು ಎಂದು ಕರೆದಿತ್ತು... ಕಾಂಗ್ರೆಸ್‌ ಪ್ರಕಾರ ಪ್ರಧಾನಿ ಮೋದಿಯವರು ಮಾತ್ರ ಹೇಳಬಾರದು.. ಮೋದಿ ಅವರು ರಾಷ್ಟ್ರೀಯ ಹಿತಾಸಕ್ತಿ ಕೇಂದ್ರವಾಗಿಟ್ಟುಕೊಂಡು ರೂಪಿಸುತ್ತಿರುವ ನೀತಿಗಳು ಕಾಂಗ್ರೆಸ್'ಗೆ ಸಹಿಸಿಕೊಳ್ಳಲಾಗುತ್ತಿಲ್ಲ. ದೇಶದ ಅಭಿವೃದ್ಧಿಯಾಗುವುದು ಕಾಂಗ್ರೆಸ್ಸಿಗರಿಗೆ ಬೇಕಾಗಿಲ್ಲ. ಕಾಂಗ್ರೆಸ್ ನ ವಿಚಿತ್ರ ಮಾನಸಿಕತೆಗೆ ಇದೊಂದು ಸ್ಪಷ್ಟ ಉದಾಹರಣೆ... #CongressFailsKarnataka See less
Sunil Kumar Karkala tweet media
ಕನ್ನಡ
2
1
5
228
Sunil Kumar Karkala
Sunil Kumar Karkala@karkalasunil·
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿದ ಅಭೂತಪೂರ್ವ ವಿಜಯದ ಸಂಭ್ರಮಚಾರಣೆಗಿ ಇಂದು ಕಾರ್ಕಳದ ಶ್ರೀ ಮಾಧವೇಂದ್ರ ಜ್ಯೂಸ್ ಸೆಂಟರ್ ಬಳಿ ಜೈ ಹಿಂದ್ ಗ್ರಾಮೀಣ ಕ್ಲಬ್ ಕಾರ್ಕಳ ಇವರ ವತಿಯಿಂದ ಸಾರ್ವಜನಿಕರಿಗೆ ಮೋದಿ ಝಾಲ್ ಮುರಿ ವಿತರಣೆ ನಡೆಸಿ ಸಂಭ್ರಮಿಸಿದ ಕ್ಷಣಗಳು
ಕನ್ನಡ
0
1
13
238
Sunil Kumar Karkala
Sunil Kumar Karkala@karkalasunil·
"ಅಭಿಮಾನದ ಅಭಿಮಾನೋತ್ಸವ" ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸೋಣ. BSY ಅಭಿಮಾನೋತ್ಸವ ಮೇ 9, 2026 | ಚಿತ್ರದುರ್ಗ ಮಧ್ಯಾಹ್ನ 01.00 ಗಂಟೆಗೆ #BSYಅಭಿಮಾನೋತ್ಸವ #BsyAbhimanotsava
Sunil Kumar Karkala tweet media
ಕನ್ನಡ
2
4
15
247
Sunil Kumar Karkala
Sunil Kumar Karkala@karkalasunil·
ಪಶ್ಚಿಮ ಬಂಗಾಲವನ್ನು ಸುದೀರ್ಘ ಕಾಲದಿಂದ ಕಾಡುತ್ತಿದ್ದ ಅರಾಜಕತೆಗೆ ಕೊನೆಗೂ ಅಲ್ಲಿನ ಮತದಾರ ಅಂತ್ಯ ಹಾಡಿದ್ದಾರೆ. ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಕನಸು ಇಂದು ನನಸಾಗಿದೆ. ಬಾಂಗ್ಲಾ ದೇಶದ ಮತಾಂಧರಿಗೆ ದೇಶದ ಹೆಬ್ಬಾಗಿಲು ತೆರೆದು ಸ್ವಾಗತಿಸಿ ಅವರನ್ನೇ ತನ್ನ ಮತಬ್ಯಾಂಕ್ ಆಗಿಸಿಕೊಂಡು ಕ್ರೂರ ದಬ್ಬಾಳಿಕೆ ನಡೆಸುತ್ತಿದ್ದ ಮಮತಾ ಬ್ಯಾನರ್ಜಿಯವರ ದುಷ್ಟ ಅಟ್ಟಹಾಸವನ್ನು ಕುಟ್ಟಿ ಬಿಸಾಡುವಲ್ಲಿ ಪ್ರಧಾನಿ ಶ್ರೀ @narendramodi , ಗೃಹ ಸಚಿವ ಶ್ರೀ @AmitShah , ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @NitinNabin ಅವರ ನಿರಂತರ ಪ್ರಯತ್ನ ಅವರ್ಣನೀಯ. ತೃಣಮೂಲ ಕಾಂಗ್ರೆಸ್ ನ ಗೂಂಡಾಗಿರಿ ರಾಜಕಾರಣಕ್ಕೆ ಕೊನೆ ಹಾಡಲಾಗಿದೆ. ಅದೇ ರೀತಿ ಆಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಪುದುಚೇರಿ ಯಲ್ಲಿ ಎನ್ ಡಿಎ ಗೆಲುವು ಅಭೂತಪೂರ್ವ. ಒಟ್ಟಾರೆ ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದಕ್ಕೆ ಕಾರಣರಾದ ದೇವದುರ್ಲಬ ಕಾರ್ಯಕರ್ತರ ಅವಿಶ್ರಾಂತ ಶ್ರಮಕ್ಕೆ ವಂದನೆ - ಅಭಿನಂದನೆ.
ಕನ್ನಡ
2
5
27
546
Sunil Kumar Karkala
Sunil Kumar Karkala@karkalasunil·
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಮಾಜಿ ಸಚಿವರಾದ ಡಿ.ಎನ್.ಜೀವರಾಜ್ ಅವರು ಗೆಲುವು ಸಾಧಿಸಿದ್ದಾರೆ. ಸುದೀರ್ಘ ಅವಧಿಯಿಂದ ಅವರು ನಡೆಸಿದ ಕಾನೂನು ಹೋರಾಟಕ್ಕೆ ಜಯ ಲಭಿಸಿದ್ದು, ಜೀವರಾಜ್ ಅವರಿಗೆ ಶುಭ ಹಾರೈಸುತ್ತೇನೆ.
ಕನ್ನಡ
2
12
166
1.9K
Sunil Kumar Karkala
Sunil Kumar Karkala@karkalasunil·
ಭಾರತೀಯ ಜನತಾ ಪಕ್ಷ ಕಾರ್ಕಳ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಶಿಕ್ಷಣ ಮಹಾಭಿಯಾನ ಮತ್ತು ಮಂಡಲ ಮಟ್ಟದ ಪ್ರತಿ ಶಿಕ್ಷಣ ವರ್ಗ.... #BJPGovernment #BjpKarkala #ಬಿಜೆಪಿಕಾರ್ಕಳ #BJP #ಬಿಜೆಪಿ
Sunil Kumar Karkala tweet mediaSunil Kumar Karkala tweet mediaSunil Kumar Karkala tweet mediaSunil Kumar Karkala tweet media
ಕನ್ನಡ
0
0
3
147
Sunil Kumar Karkala
Sunil Kumar Karkala@karkalasunil·
ಅಭಿನಂದನೆಗಳು SSLCಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು. ಫಲಿತಾ೦ಶದಲ್ಲಿ ಹಿನ್ನಡೆಯಾಗಿದ್ದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ ಪೂರಕ ಪರೀಕ್ಷೆಗಳನ್ನು ಸಮರ್ಥವಾಗಿ ಸ್ವೀಕರಿಸಿ ಮುನ್ನಡೆಯಿರಿ. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಿರಲಿ
Sunil Kumar Karkala tweet media
ಕನ್ನಡ
0
0
7
178
Sunil Kumar Karkala
Sunil Kumar Karkala@karkalasunil·
ಸೋಲಿನ ಹತಾಶೆ ಕಾಡಿದ ಸಂದರ್ಭದಲ್ಲೆಲ್ಲ @INCIndia ಪಕ್ಷ ಬಿಜೆಪಿಯ ಮಹನ್ನೋತ ನಾಯಕ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿ @narendramodi ಯವರ ವಿರುದ್ಧ ವೈಯಕ್ತಿಕ ದಾಳಿಯನ್ನು ನಡೆಸುತ್ತಲೇ ಬಂದಿದೆ. “ಮೌತ್ ಕಾ ಸೌದಾಗರ್”, “ನೀಚ್”, “ಚಾಯ್ ವಾಲಾ”, “ರಾವಣ”, “ಚೌಕಿದಾರ್ ಚೋರ್ ಹೇ”, “ವಿಷಸರ್ಪ” ಎಂಬಿತ್ಯಾದಿ ಪದಗಳ ಮೂಲಕ ನಿರಂತರವಾಗಿ @narendramodi ಅವರ ಮೇಲೆ ನಿಂದನೆ ನಡೆಸಲಾಗಿದೆ. ಪ್ರತಿ ಬಾರಿ ಈ ರೀತಿಯ ಅವಹೇಳನ ನಡೆದಾಗಲೂ ದೇಶದ ಜನತೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಪಾಠ ಕಲಿಯದ ಕಾಂಗ್ರೆಸ್ ಪಕ್ಷ, ಸೋಲು ಮತ್ತು ತಿರಸ್ಕಾರದ ಹತಾಶೆಯಲ್ಲಿ ಈಗ ಪ್ರಧಾನಿಯನ್ನು “ಟೆರರಿಸ್ಟ್” ಎಂದು ಕರೆಯುವ ಮಟ್ಟಕ್ಕೆ ಇಳಿದಿದೆ.‌ಮಲ್ಲಿಕಾರ್ಜುನ ಖರ್ಗೆಯವರಂಥ ನಾಯಕರೇ ಈ ಮಟ್ಟಗೆ ಇಳಿದಿರುವುದು ಕಾಂಗ್ರೆಸ್ ನ ನೈತಿಕ ಅಧಃಪತನದ ಸಂಕೇತ. ಇದು ಕೇವಲ ಒಬ್ಬ ನಾಯಕನ ವಿರುದ್ಧದ ಹೇಳಿಕೆ ಅಲ್ಲ. ದೇಶ, ಜನತೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನ. ಸಾರ್ವಜನಿಕ‌ ಚರ್ಚೆಯ ಅನುಸಂಧಾನವನ್ನು ಈ ಮಟ್ಟಕ್ಕೆ ಇಳಿಸಿದ @kharge ಯವರು ದೇಶದ ಜನರ ಕ್ಷಮೆ ಯಾಚಿಸಬೇಕು.
ಕನ್ನಡ
1
3
8
243
Sunil Kumar Karkala
Sunil Kumar Karkala@karkalasunil·
ಕ್ರಾಂತಿಕಾರಕವಾದ ಮಹಿಳಾ ಮೀಸಲಾತಿ ವಿಧೇಯಕವನ್ನು ಇಂಡಿ ಒಕ್ಕೂಟದ ಸದಸ್ಯರು ಲೋಕಸಭೆಯಲ್ಲಿ ಸೋಲುವಂತೆ ಮಾಡಿರುವುದು ದೇಶದ ಇತಿಹಾಸದಲ್ಲೇ ಒಂದು ಮರೆಯಲಾರದ ದಿನ. ಸ್ತ್ರೀ ಸಮಾನತೆ, ಅಧಿಕಾರ ಸಮಾನತೆ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡುವ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ, ಮಹಿಳಾ ಮೀಸಲಾತಿ ವಿಧೇಯಕದ ಬಗ್ಗೆ ಮೊದಲಿನಿಂದಲೂ ವಿರೋಧದ ಧೋರಣೆಯನ್ನೇ ತಾಳಿತ್ತು. ಇದರಿಂದ ಸ್ಥಾಪಿತ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾಂಗ್ರೆಸ್ಸಿನ ಲೆಕ್ಕಾಚಾರ ಈ ವಿಧೇಯಕದ ಸೋಲಿಗೆ ಕಾರಣವಾಗಿದ್ದು, ಇಂಡಿ ಒಕ್ಕೂಟದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. @RahulGandhi ಯವರು ಸದಾ ಮಹಿಳಾ ಮೀಸಲಾತಿ ಮತ್ತು ಸಮಾನತೆಯ ಬಗ್ಗೆ ಮಾತನಾಡುವವರು, ತಮ್ಮದೇ ನೇತೃತ್ವದ ಒಕ್ಕೂಟ ವಿಧೇಯಕವನ್ನು ಬೀಳಿಸಿದ್ದರ ಬಗ್ಗೆ ಏನೆನ್ನುತ್ತಾರೆ? @INCIndia @INCKarnataka
ಕನ್ನಡ
0
4
19
393
Sunil Kumar Karkala
Sunil Kumar Karkala@karkalasunil·
ಕ್ಷೇತ್ರ ಪುನರ್ ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂದು ಮೊದಲು ಮುಂಚೂಣಿಯಲ್ಲಿ ನಿಂತು ವಿರೋಧ ವ್ಯಕ್ತಪಡಿಸಿದವರು ಮುಖ್ಯಮಂತ್ರಿ @siddaramaiah . ಅವರನ್ನು ಅನುಸರಿಸಿ ರಾಜ್ಯ ಕಾಂಗ್ರೆಸ್ ನ ಹಲವರು ಸುಳ್ಳು ನರೇಟಿವ್ ಸೃಷ್ಟಿಸುವ ಕೆಲಸವನ್ನು ವ್ಯವಸ್ಥಿತವಾಗಿ ನಡೆಸಿದರು. ಜನರನ್ನು ಒಟ್ಟಾರೆಯಾಗಿ ತಪ್ಪು ದಾರಿಯಲ್ಲಿ ನಡೆಸಬೇಕೆಂಬುದಷ್ಟೇ ಅವರ ಇರಾದೆಯಾಗಿತ್ತು. ಮಹಿಳಾ ಮೀಸಲಾತಿ ವಿಚಾರದಲ್ಲೂ ಕಾಂಗ್ರೆಸ್ ಇದೇ ನರೇಟಿವ್ ಮೂಲಕ ದಾಳಿ ನಡೆಸುವ ಪ್ರಯತ್ನ ನಡೆಸಿತು. ಆದರೆ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ತಿದ್ದುಪಡಿ ಮಸೂದೆ, ಕ್ಷೇತ್ರ ಮರುವಿಂಗಡಣೆಯ ಎರಡು ಕಾಯ್ದೆಗಳು ಮತ್ತು ಚುನಾವಣಾ ಕಾನೂನಿನ ಬದಲಾವಣೆಗಳು ದಕ್ಷಿಣ ಭಾರತದ ಶಕ್ತಿಯನ್ನು ಕುಂದಿಸುತ್ತವೆ ಎಂಬ ನರೇಟಿವ್ ನ್ನು ತುಂಡರಿಸಿದ್ದಾರೆ. ಕರ್ನಾಟಕ ಪ್ರಸ್ತುತ 28 ಲೋಕಸಭಾ ಸ್ಥಾನಗಳನ್ನು ಹೊಂದಿದೆ, ಇದು ಸದನದ ಒಟ್ಟು 543 ಸ್ಥಾನಗಳ ಶೇ. 5.15 ರಷ್ಟಿದೆ. ಈ ಮಸೂದೆ ಅಂಗೀಕಾರವಾದ ನಂತರ, ಕರ್ನಾಟಕದ ಸಂಸದರ ಸಂಖ್ಯೆ 28 ರಿಂದ 42 ಕ್ಕೆ ಏರುತ್ತದೆ ಮತ್ತು ಲೋಕಸಭೆಯಲ್ಲಿ ಅದರ ಪಾಲು ಶೇ. 5.44 ಕ್ಕೆ ಹೆಚ್ಚಾಗುತ್ತದೆ. ಕರ್ನಾಟಕಕ್ಕೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಆಂಧ್ರಪ್ರದೇಶ ಪ್ರಸ್ತುತ 25 ಸ್ಥಾನಗಳನ್ನು ಹೊಂದಿದೆ (ಶೇ. 4.60). ಮಸೂದೆಯ ನಂತರ, ಸಂಸದರ ಸಂಖ್ಯೆ 38 ಕ್ಕೆ ಏರುತ್ತದೆ, ಇದು ಶೇ. 4.65 ರಷ್ಟಾಗುತ್ತದೆ. ತೆಲಂಗಾಣ ಪ್ರಸ್ತುತ 17 ಸ್ಥಾನಗಳನ್ನು ಹೊಂದಿದೆ (ಶೇ. 3.13). ಮಸೂದೆಯ ನಂತರ, ಸಂಸದರ ಸಂಖ್ಯೆ 26 ಕ್ಕೆ ಏರುತ್ತದೆ, ಇದು ಶೇ. 3.18 ರಷ್ಟಾಗುತ್ತದೆ. ತಮಿಳುನಾಡು: ಪ್ರಸ್ತುತ 39 ಸ್ಥಾನಗಳನ್ನು ಹೊಂದಿದೆ (ಶೇ. 7.18). ಮಸೂದೆಯ ನಂತರ, ಸಂಸದರ ಸಂಖ್ಯೆ 59 ಕ್ಕೆ ಏರಲಿದೆ ಮತ್ತು 816 ಸದಸ್ಯರ ಹೊಸ ಸದನದಲ್ಲಿ ಅವರ ಪಾಲು ಶೇ. 7.23 ರಷ್ಟಾಗುತ್ತದೆ. ತಮಿಳುನಾಡಿಗೂ ಯಾವುದೇ ನಷ್ಟವಾಗುವುದಿಲ್ಲ. ಕೇರಳ: ಪ್ರಸ್ತುತ 20 ಸ್ಥಾನಗಳನ್ನು ಹೊಂದಿದೆ (ಶೇ. 3.68). ಮಸೂದೆಯ ನಂತರ, ಸಂಸದರ ಸಂಖ್ಯೆ 30 ಕ್ಕೆ ಏರುತ್ತದೆ ಮತ್ತು ಹೊಸ ಸದನದಲ್ಲಿ ಅವರ ಪಾಲು ಶೇ. 3.67 ರಷ್ಟಿರುತ್ತದೆ. ​ ಪ್ರಸ್ತುತ 543 ಸ್ಥಾನಗಳಲ್ಲಿ 129 ಸಂಸದರು ದಕ್ಷಿಣದವರಾಗಿದ್ದಾರೆ, ಇದು ಸುಮಾರು ಶೇ. 23.76 ರಷ್ಟಿದೆ. ಹೊಸ ಸದನದಲ್ಲಿ 195 ಸಂಸದರು ದಕ್ಷಿಣಭಾರತದವರಾಗಿರುತ್ತಾರೆ. ಸಂವಿಧಾನ ತಜ್ಞ ಸಿದ್ದರಾಮಯ್ಯನವರೇ ನೀವು ಸೃಷ್ಟಿಸಿದ ಸುಳ್ಳು ನರೇಟಿವ್ ಗಾಗಿ ದೇಶದ ಕ್ಷಮೆ ಕೇಳಬೇಕಲ್ಲವೇ ?
ಕನ್ನಡ
0
4
8
299
Sunil Kumar Karkala
Sunil Kumar Karkala@karkalasunil·
ಪ್ರಧಾನಿ @narendramodi ನೇತೃತ್ವದ ಎನ್ ಡಿಎ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ವಿರೋಧಿಸುವುದು ಅಥವಾ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವುದು ಸಿಎಂ @siddaramaiah , @INCIndia ಹಾಗೂ ಇಂಡಿ ಒಕ್ಕೂಟದ ದಿನಚರಿಯಾಗಿ ಬಿಟ್ಟಿದೆ. ಅಗತ್ಯವೋ, ಅನಗತ್ಯವೋ ಟೀಕೆ ಗಾಗಿ ಟೀಕೆ. ಅದು ಪಾಕಿಸ್ತಾನದ ವಿರುದ್ಧದ ಸರ್ಜಿಕಲ್ ದಾಳಿಯಾಗಿರಬಹುದು, ವಿದೇಶಾಂಗ ನೀತಿಯಾಗಿರಬಹುದು, ಕಾಶ್ಮೀರದ ವಿಶೇಷಾಧಿಕಾರ ಕಿತ್ತು ಹಾಕಿದ್ದಿರಬಹುದು, ಭಯೋತ್ಪಾದಕರನ್ನು ಮಟ್ಟ ಹಾಕಿದ್ದಿರಬಹುದು. ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷಿ ಕೇಳಿದವರಿಂದ, ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಭಾರತದ ಎಷ್ಟು ಯುದ್ಧ ವಿಮಾನಗಳು ಪತನಗೊಂಡವು ಎಂದು ಲೆಕ್ಕ ಕೇಳಿದವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ? ಕಾಂಗ್ರೆಸ್ ನ ಈ ಟೀಕೆಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ ಕ್ಷೇತ್ರ ಪುನರ್ವಿಂಗಡಣೆ. ಈ ನೀತಿ ಜಾರಿಗೆ ಬಂದರೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಹುಯಿಲನ್ನು ವ್ಯವಸ್ಥಿತವಾಗಿ ಹರಿಬಿಡಲಾಗುತ್ತಿದೆ. ವಿಧೇಯಕ ಮಂಡನೆಯಾಗುವುದಕ್ಕೆ ಮುನ್ನವೇ ಸಂಸತ್ತಿನ ಹೊರಗೆ ಕಾಂಗ್ರೆಸ್ ನಡೆಸುತ್ತಿರುವ ಈ ವ್ಯವಸ್ಥಿತ ದಾಳಿ ಪ್ರಜಾಪ್ರಭುತ್ವಕ್ಕೆ ಮಾರಕ. ಇದರ ಬದಲು ಸಂಸತ್ ಕಲಾಪದಲ್ಲಿ ಭಾಗವಹಿಸಿ, ಮೌಲ್ಯಯುತ ಸಲಹೆ ನೀಡಿ ಎಂದು ಆಗ್ರಹಿಸುತ್ತೇನೆ.
ಕನ್ನಡ
1
4
10
532
Sunil Kumar Karkala
Sunil Kumar Karkala@karkalasunil·
Whatever decision the NDA government led by Prime Minister @narendramodi takes, opposing it or interpreting it to suit their own narrative has become the daily routine of Chief Minister @siddaramaiah , the Congress party, and the INDI Alliance. Criticism for the sake of criticism, whether necessary or unnecessary. It could be the surgical strike against Pakistan, foreign policy, the removal of Kashmir’s special status, or action against terrorists. What more can be expected from those who demanded proof of the surgical strike, and from those who asked how many Indian fighter jets were lost in the war with Pakistan? Now, a new addition has been made to the Congress party’s list of criticisms, constituency delimitation. A systematic fear campaign is being spread that if this policy is implemented, southern states will face injustice. Even before the bill is introduced, this organized attack being carried out by Congress outside Parliament is harmful to democracy. Instead, I urge them to participate in the parliamentary proceedings and offer valuable suggestions.
English
0
3
6
162