Ramalinga Reddy

6.5K posts

Ramalinga Reddy banner
Ramalinga Reddy

Ramalinga Reddy

@RLR_BTM

Transport & Muzrai Minister, Karnataka | Incharge Minister - Bengaluru South District (Ramanagara) | MLA - BTM Layout |

Karnataka Katılım Eylül 2016
25 Takip Edilen79.1K Takipçiler
Ramalinga Reddy
Ramalinga Reddy@RLR_BTM·
ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. 🕉️☀️ ಈ ಹೊಸ ಸಂವತ್ಸರವು ಎಲ್ಲರಿಗೂ ಶುಭವನ್ನುಂಟು ಮಾಡಲಿ. Wishing you all a prosperous and joyful Ugadi! May the New Year usher in a season of growth and success for all. #RamalingaReddy #BTMLayout #Bengaluru #GBA #Ugadi
Ramalinga Reddy tweet media
4
5
34
559
Ramalinga Reddy
Ramalinga Reddy@RLR_BTM·
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ 70 ಹವಾನಿಯಂತ್ರಣ ರಹಿತ ಸ್ಲೀಪರ್ ಪಲ್ಲಕ್ಕಿ ಬಸ್ಸು ಹಾಗೂ 45 ಕರ್ನಾಟಕ ಸಾರಿಗೆ ಬಸ್ಸುಗಳಿಗೆ ಚಾಲನೆ ನೀಡಿದೆ. ನಿಗಮಕ್ಕೆ ಒಟ್ಟು 805 ಸಂಖ್ಯೆಯ ಹೊಸ ಕರ್ನಾಟಕ ಸಾರಿಗೆ ಹಾಗೂ ನಗರ/ಗ್ರಾಮಾಂತರ ಸಾರಿಗೆ ವಾಹನಗಳು ಏಪ್ರಿಲ್, ಮೇ & ಜೂನ್-2026 ಮಾಹೆಗಳಲ್ಲಿ ಸೇರ್ಪಡೆಗೊಳ್ಳಲಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ನೀಡಿರುವ ಮಹತ್ವದ ಕೊಡುಗೆಗಳನ್ನು ಸ್ಮರಿಸುವುದು ಮತ್ತು ಅವರ ಹಕ್ಕುಗಳು, ಸಮಾನತೆ ಹಾಗೂ ಗೌರವವನ್ನು ಉತ್ತೇಜಿಸುವುದು ಈ ದಿನದ ಉದ್ದೇಶವಾಗಿದೆ. ಕುಟುಂಬ, ಶಿಕ್ಷಣ, ವಿಜ್ಞಾನ, ಸಾಮಾಜಿಕ, ರಾಜಕೀಯ, ಆರ್ಥಿಕತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಮಹತ್ತರ ಸಾಧನೆಗಳನ್ನು ಮಾಡುತ್ತಿದ್ದಾರೆ. ಮಹಿಳೆಯರ ಸಬಲೀಕರಣವು ಸಮಾಜದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದ್ದು, ಅವರಿಗೆ ಸಮಾನ ಅವಕಾಶಗಳು ಮತ್ತು ಸುರಕ್ಷಿತ ವಾತಾವರಣವನ್ನು ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುಮಾರು 1.04 ಲಕ್ಷ ಸಿಬ್ಬಂದಿಗಳಿದ್ದು, ಇವರಲ್ಲಿ 8,956 ಮಹಿಳಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 3167 ನಿರ್ವಾಹಕರು, 2254-ತಾಂತ್ರಿಕ ಸಿಬ್ಬಂದಿಗಳು, 3535-ಆಡಳಿತ ಸಿಬ್ಬಂದಿಗಳಾಗಿರುತ್ತಾರೆ. “ಶಕ್ತಿ ಯೋಜನೆ” ಯಲ್ಲಿ ಮಹಿಳೆಯರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಿದ್ದು, ದಿನಾಂಕ: 12ನೇ ಮಾರ್ಚ್ 2026ಕ್ಕೆ 688.83 ಕೋಟಿ ಮಹಿಳೆಯರು ಪ್ರಯಾಣಿಸಿರುತ್ತಾರೆ. ಇದೇ ಸಂದರ್ಭದಲ್ಲಿ ನಿಗಮದ 17 ವಿಭಾಗಗಳಿಂದ ತಲಾ ಒಬ್ಬರಂತೆ ಉತ್ತಮ ಕಾರ್ಯ ಸಾಧನೆ ತೋರಿದ, ತಾಂತ್ರಿಕ ಸಿಬ್ಬಂದಿ-19, ನಿರ್ವಾಹಕರು-15, ಹಾಗೂ ಕರಾಸಾ ಪೇದೆ-12, ಒಟ್ಟು 46 ಮಹಿಳಾ ಸಿಬ್ಬಂದಿಗಳು ಪ್ರಶಸ್ತಿಯನ್ನು ಸ್ವೀಕರಿಸಿರುವುದು ಗೌರವದ ವಿಷಯ. ಪಲ್ಲಕ್ಕಿ ಬಸ್ಸುಗಳನ್ನು ಉಡುಪಿ, ಮಂಗಳೂರು, ಮೈಸೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಂಪಿ, ರಾಯಚೂರು, ಜಮಖಂಡಿ, ಪುತ್ತೂರು, ಕಾಣಿಯೂರು, ಕುಕ್ಕೆ ಸುಬ್ರಹ್ಮಣ್ಯ, ಕಾಸರಗೋಡು, ಮಂತ್ರಾಲಯ, ತಿರುಚಿ, ಕೊಜಿಕ್ಕೋಡ್, ಮುನ್ನಾರ್, ಪಾಂಡಿಚೇರಿ, ತಂಜಾವೂರು, ಕೊಟ್ಟಾಯಂ, ಹೈದಾರಬಾದ್, ಚೆನ್ನೈ, ಪಣಜಿ, ಮಧುರೈ, ಕುಂಭಕೋಣಂ, ಎರ್ನಾಕುಲಂಗೆ ಕಾರ್ಯಾಚರಣೆ ಮಾಡಲಾಗುತ್ತದೆ. ಪದ್ಮಶ್ರೀ ಪುರಸ್ಕೃತರಾದ ಡಾ. ಶುಭ ವಿ, ಶ್ರೀ ಅಕ್ರಂ ಪಾಷ, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಶ್ರೀಮತಿ ಗಾಯಿತ್ರಿ ಕೆ.ಎಂ. ಭಾಆಸೇ., ಡಾ ಲತಾ, ಕರಾರಸಾ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. #KSRTC #Karnataka #RamalingaReddy #WomensDay #womenempowement
Ramalinga Reddy tweet mediaRamalinga Reddy tweet mediaRamalinga Reddy tweet mediaRamalinga Reddy tweet media
ಕನ್ನಡ
2
2
25
807
Ramalinga Reddy retweetledi
Karnataka Congress
Karnataka Congress@INCKarnataka·
ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 11,500 ಬಸ್ ಟ್ರಿಪ್ ಗಳು ಹೊರಡುತ್ತವೆ. ಅಗತ್ಯಕ್ಕೆ ತಕ್ಕಂತೆ ಪ್ರಾಜೆಕ್ಟ್ ಮೆಜೆಸ್ಟಿಕ್ ಹೆಸರಿನಲ್ಲಿ ಸಿಂಗಾಪುರಕ್ಕಿಂತಲೂ ಉತ್ತಮವಾದ ಟವರ್ ನಿರ್ಮಿಸಲು ನಾವು ಪ್ರಯತ್ನಿಸುತ್ತೇವೆ. @RLR_BTM ಸಾರಿಗೆ ಸಚಿವರು
ಕನ್ನಡ
10
26
163
4.8K
Ramalinga Reddy
Ramalinga Reddy@RLR_BTM·
ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಿ 6 ವರ್ಷಗಳನ್ನು ಪೂರೈಸಿರುವ ನನ್ನ ಆತ್ಮೀಯ ಸಹೋದ್ಯೋಗಿ ಹಾಗೂ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದೆ. #RamalingaReddy #DKShivakumar #KPCC #KarnatakaCongress #Leadership #6YearsOfDKS @DKShivakumar
Ramalinga Reddy tweet media
ಕನ್ನಡ
2
5
30
437
Ramalinga Reddy
Ramalinga Reddy@RLR_BTM·
2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅಮೋಘ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಅಭಿನಂದನೆಗಳು. 🇮🇳🏆🏏 ನಿಮ್ಮ ಈ ಸಾಧನೆ ಕೋಟ್ಯಂತರ ಭಾರತೀಯರ ಮೊಗದಲ್ಲಿ ನಗು ತಂದಿದೆ. ಭಾರತೀಯ ಕ್ರಿಕೆಟ್‌ನ ಈ ಸುವರ್ಣ ಯುಗ ಹೀಗೆ ಮುಂದುವರಿಯಲಿ. #RamalingaReddy #WorldCupChampions #TeamIndia #T20WorldCup
Ramalinga Reddy tweet media
ಕನ್ನಡ
0
4
36
581
Ramalinga Reddy
Ramalinga Reddy@RLR_BTM·
ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ "ಬೃಹತ್ ಉದ್ಯೋಗ ಮೇಳ"ವನ್ನು ಉದ್ಘಾಟಿಸಲಾಯಿತು. ಸಂದರ್ಶನದಲ್ಲಿ ಯಶಸ್ವಿಯಾಗಿ ಆಯ್ಕೆಯಾದ ನೂರಾರು ಯುವಕ-ಯುವತಿಯರಿಗೆ ಸ್ಥಳದಲ್ಲೇ ನೇಮಕಾತಿ ಪತ್ರಗಳನ್ನು ವಿತರಿಸಿ, ಅವರ ಹೊಸ ಜೀವನದ ಹಾದಿಗೆ ಶುಭ ಕೋರಲಾಯಿತು. ನಮ್ಮ ಯುವಶಕ್ತಿ ಆರ್ಥಿಕವಾಗಿ ಸದೃಢರಾಗಲು ಇಂತಹ ಮೇಳಗಳು ಸಹಕಾರಿಯಾಗಲಿ ಎಂದು ಹಾರೈಸುತ್ತೇನೆ. ಸ್ಥಳೀಯ ಶಾಸಕರಾದ ಶ್ರೀ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ರಾಮೋಜಿಗೌಡ, ಎಂಇಐ ಅಧ್ಯಕ್ಷರಾದ ಶ್ರೀ ಎಸ್.ಮನೋಹರ್ ಹಾಗೂ ಇತರ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. #RamalingaReddy #Ramanagara #JobFair #Employment #CareerDevelopment #YouthEmpowerment #RamanagaraJobs #NammaKarnataka
Ramalinga Reddy tweet mediaRamalinga Reddy tweet mediaRamalinga Reddy tweet mediaRamalinga Reddy tweet media
ಕನ್ನಡ
3
4
26
533
Ramalinga Reddy
Ramalinga Reddy@RLR_BTM·
ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಇಂದು ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ರಾಮನಗರ ಹಾಗೂ ಕನಕಪುರ ಭಾಗದ ಜನರಿಗಾಗಿ ಬಿಎಂಟಿಸಿಯ ನೂತನ "ವಜ್ರ ವಿಸ್ತಾರ" ಹವಾನಿಯಂತ್ರಿತ (AC) ಬಸ್ ಸೇವೆಗಳನ್ನು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಲಾಯಿತು. ಇಂದಿನಿಂದ ಲಭ್ಯವಿರುವ ಸೇವೆಗಳು: 📍 ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) – ರಾಮನಗರ 📍 ಬನಶಂಕರಿ – ಕನಕಪುರ ನಮ್ಮ ಸರ್ಕಾರದ ಪ್ರಮುಖ ಗುರಿ ಸಾರ್ವಜನಿಕರಿಗೆ ಸುಕ್ಷೇಮ ಮತ್ತು ಅತ್ಯಾಧುನಿಕ ಸಾರಿಗೆ ಸೌಲಭ್ಯ ಒದಗಿಸುವುದಾಗಿದೆ. ಈ ಭಾಗದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ಈ ಎಸಿ ಬಸ್ ಸೇವೆಗಳು ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವ ನೀಡಲಿವೆ. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಹೆಚ್.ಎ.ಇಕ್ಬಾಲ್ ಹುಸೇನ್, ಬಿಎಂಟಿಸಿ ಅಧ್ಯಕ್ಷರಾದ ಶ್ರೀ ವಿ. ಎಸ್ ಆರಾಧ್ಯ, ಉಪಾಧ್ಯಕ್ಷರಾದ ಶ್ರೀ ನಿಕೇತ್ ರಾಜ್ ಮೌರ್ಯ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಕುಮಾರ್ ಕೆ.ಬಿ, ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. #RamalingaReddy #DKShivakumar #BMTC #VajraVistara #Ramanagara #Kanakapura #KarnatakaDevelopment #PublicTransport
Ramalinga Reddy tweet mediaRamalinga Reddy tweet mediaRamalinga Reddy tweet media
ಕನ್ನಡ
3
6
23
2K
Ramalinga Reddy
Ramalinga Reddy@RLR_BTM·
Thank you @TVMohandasPai, Our goal is to provide skills and opportunities so that thousands more can earn a dignified living. We are committed to helping them achieve true financial independence. Also, it is heartening to know that you have been supporting these people since the very beginning. 🛺
Mohandas Pai@TVMohandasPai

@RLR_BTM thanks much Minister Great work

English
3
8
71
12.6K
Ramalinga Reddy retweetledi
Karnataka Congress
Karnataka Congress@INCKarnataka·
Free auto driving training for women and transgender persons marks another milestone in inclusive governance. Transport Minister Ramalinga Reddy rightly said auto-rickshaws are the backbone of Bengaluru’s transport system and now they are becoming a pathway to economic self-reliance. Under the Congress Government in Karnataka, empowerment is not a slogan, but action on the ground. #CongreesForKarnataka
Karnataka Congress tweet media
English
1
26
41
770
Ramalinga Reddy
Ramalinga Reddy@RLR_BTM·
ಶ್ರೀ @RAshokaBJP ಅವರೇ, ಹಿಂದೆ ಶ್ರೀ @BSYBJP ಹಾಗೂ ಶ್ರೀ @BSBommai ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹತ್ತಾರು ಬಾರಿ ಉರ್ದು ಪತ್ರಿಕೆಗಳಿಗೆ ಉರ್ದು ಜಾಹೀರಾತುಗಳನ್ನು ನೀಡಲಾಗಿತ್ತು. ಅಂದು ನೀವು ಮತ್ತು @BJP4Karnataka ಯಾರ ಓಲೈಕೆಗೆ ಈ ನಿರ್ಧಾರ ಮಾಡಿದ್ದಿರಿ? ಆ ಸಂದರ್ಭದಲ್ಲಿ ಇದು ನಿಮಗೆ ತುಷ್ಟೀಕರಣದಂತೆ ಭಾಸವಾಗಲಿಲ್ಲವೇ? ಈಗ ನಮ್ಮ ಸರ್ಕಾರದ ಜಾಹೀರಾತನ್ನು ಕಂಡೊಡನೆ, ನಿಮ್ಮೊಳಗಿದ್ದ ಕನ್ನಡಪ್ರೇಮ ದಿಢೀರನೆ ಜಾಗೃತಗೊಂಡಿದ್ದು ಹೇಗೆ ಎಂಬುದನ್ನು ರಾಜ್ಯದ ಜನತೆಗೆ ಮೊದಲು ವಿವರಿಸಿ. ನಿಮ್ಮ ಈ 'ದ್ವಂದ್ವ ನಿಲುವು' ಹಾಗೂ 'ಬೂಟಾಟಿಕೆಯ' ವರ್ತನೆಯನ್ನು ನೋಡಿದರೆ, ಊಸರವಳ್ಳಿ ಬಣ್ಣ ಬದಲಿಸುವುದೂ ನಾಚುವಂತಿದೆ! ಇತ್ತೀಚೆಗೆ ಉರ್ದು ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ರಾಜ್ಯ ಸರ್ಕಾರದ ಉರ್ದು ಭಾಷೆಯ ಜಾಹೀರಾತನ್ನೇ ನೆಪವಾಗಿಟ್ಟುಕೊಂಡು, ನೀವು ಸೇರಿದಂತೆ ಹಲವು ಬಿಜೆಪಿ ನಾಯಕರು ಮಾಡುತ್ತಿರುವ ಅನಗತ್ಯ ಗದ್ದಲ ನಿಮ್ಮ ಆತ್ಮವಂಚನೆಯನ್ನು ಜಗಜ್ಜಾಹೀರು ಮಾಡಿದೆ. ಅಸಲಿಗೆ, ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತ ಮಾಹಿತಿ ಜನಸಾಮಾನ್ಯರನ್ನು ತಲುಪಬೇಕು ಎಂಬುದೇ ಜಾಹೀರಾತುಗಳ ಪ್ರಮುಖ ಉದ್ದೇಶ. ಯಾವ ಭಾಷೆಯ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟವಾಗುತ್ತದೆಯೋ, ಅದೇ ಭಾಷೆಯಲ್ಲಿ ನೀಡಿದರೆ ಓದುಗರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂಬ ಸದುದ್ದೇಶದಿಂದ ಈ ಪದ್ಧತಿಯನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ರಾಜ್ಯದ ನೆಲ, ಜಲ, ಭಾಷೆಯ ಕುರಿತ ನಮ್ಮ ಬದ್ಧತೆಯ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಸುಖಾಸುಮ್ಮನೆ ಬೊಬ್ಬೆ ಹೊಡೆಯುವ ನಿಮ್ಮಂತಹ ಬಿಜೆಪಿ ನಾಯಕರಿಂದ ಇದರ ಪಾಠ ಕಲಿಯುವ ಸ್ಥಿತಿ ನಮಗೊದಗಿಲ್ಲ. #Kannada #Karnataka #KarnatakaGovt #RamalingaReddy #Congress #BJP @INCKarnataka
Ramalinga Reddy tweet media
ಕನ್ನಡ
4
8
24
1.1K
Ramalinga Reddy
Ramalinga Reddy@RLR_BTM·
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ನೌಕರರ ಮತ್ತು ಅವರ ಕುಟುಂಬದ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇಂದು ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮೃತ ನೌಕರರ ಅವಲಂಬಿತರಿಗೆ ಅನುಕಂಪ ಆಧಾರಿತ ನೇಮಕಾತಿ ಆದೇಶ ಪತ್ರ ಹಾಗೂ ವಿಮಾ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು. ನಮ್ಮ ಸರ್ಕಾರದ ಪ್ರಮುಖ ಸಾಧನೆಗಳು ಮತ್ತು ವಿಮಾ ಯೋಜನೆಗಳು: • ಗುಂಪು ವಿಮಾ ಯೋಜನೆಯ ಪರಿಷ್ಕರಣೆ: ನಾವು ಅಧಿಕಾರಕ್ಕೆ ಬಂದ ನಂತರ ನೌಕರರ ಹಿತದೃಷ್ಟಿಯಿಂದ ವಿಮಾ ಯೋಜನೆಯನ್ನು ಪರಿಷ್ಕರಿಸಿದ್ದೇವೆ. • ಅಪಘಾತ ಪರಿಹಾರ: ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಿಂದ ನೌಕರರು ಮೃತಪಟ್ಟಲ್ಲಿ ₹50.00 ಲಕ್ಷ ಪರಿಹಾರ ನೀಡಲಾಗುತ್ತಿದೆ. • ಸ್ವಾಭಾವಿಕ ಮರಣ: ಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಲ್ಲಿ ನೀಡಲಾಗುತ್ತಿದ್ದ ವಿಮಾ ಮೊತ್ತವನ್ನು ಅಕ್ಟೋಬರ್ 1, 2025 ರಿಂದ ಜಾರಿಗೆ ಬರುವಂತೆ ₹12.00 ಲಕ್ಷಕ್ಕೆ ಏರಿಸಲಾಗಿದೆ. ವಿಮಾ ವಿತರಣೆಯ ವಿವರ: • ಸ್ವಾಭಾವಿಕ/ಇನ್ನಿತರೆ ಕಾರಣಗಳಿಂದ ಮೃತಪಟ್ಟ 120 ನೌಕರರ ಕುಟುಂಬಗಳಿಗೆ ₹12 ಕೋಟಿ ಗುಂಪು ವಿಮಾ ಪರಿಹಾರ. • ಅಪಘಾತದಿಂದ ಮೃತಪಟ್ಟ 12 ನೌಕರರ ಕುಟುಂಬಗಳಿಗೆ ₹6 ಕೋಟಿ ಅಪಘಾತ ವಿಮಾ ಪರಿಹಾರವನ್ನು ವಿತರಿಸಲಾಯಿತು. ಕಷ್ಟದ ಸಮಯದಲ್ಲಿ ನೌಕರರ ಕುಟುಂಬಕ್ಕೆ ಆರ್ಥಿಕ ಆಸರೆ ನೀಡುವುದು ನಮ್ಮ ಆದ್ಯತೆಯಾಗಿದೆ. ನೂತನವಾಗಿ ಸಂಸ್ಥೆಗೆ ಸೇರ್ಪಡೆಗೊಂಡ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಎಸ್. ಆರಾಧ್ಯ, ಉಪಾಧ್ಯಕ್ಷರಾದ ಶ್ರೀ ನಿಕೇತ್ ರಾಜ್ ಎಂ., ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ಬಿ. ಶಿವಕುಮಾರ್ (IAS), ನಿರ್ದೇಶಕರಾದ ಶ್ರೀ ಅಬ್ದುಲ್ ಅಹದ್ (IPS), ಶ್ರೀಮತಿ ಶಿಲ್ಪಾ ಎಂ. (IAS) ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು. #RamalingaReddy #BMTC #EmployeeWelfare #KarnatakaGovernment #Bengaluru
ಕನ್ನಡ
9
4
14
751
Ramalinga Reddy
Ramalinga Reddy@RLR_BTM·
ಶೀಘ್ರವೇ ನಡೆಯಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ, ಇಂದು ರಾಜ್ಯ ಚುನಾವಣಾ ಆಯುಕ್ತರಾದ ಶ್ರೀ ಜಿ.ಎಸ್. ಸಂಗ್ರೇಶಿ ಅವರನ್ನು ನಿಯೋಗದ ಮೂಲಕ ಭೇಟಿ ಮಾಡಿ ಪ್ರಮುಖ ಮನವಿಗಳನ್ನು ಸಲ್ಲಿಸಲಾಯಿತು. ಮನವಿಯ ಮುಖ್ಯಾಂಶಗಳು: • ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮ್ಯಾಪಿಂಗ್ ಪ್ರಕ್ರಿಯೆಯು ಯಾವುದೇ ಲೋಪದೋಷಗಳಿಲ್ಲದೆ ನ್ಯಾಯಬದ್ಧವಾಗಿ ನಡೆಯಬೇಕು. • ಕೇವಲ ಕಚೇರಿ ದಾಖಲೆಗಳನ್ನು ಅವಲಂಬಿಸದೆ, ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಮೂಲಕ ಪಾರದರ್ಶಕ ಪಟ್ಟಿಯನ್ನು ಸಿದ್ಧಪಡಿಸಬೇಕು. • ಈ ಸಮಗ್ರ ಪ್ರಕ್ರಿಯೆಯಲ್ಲಿ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು, ಸಾರ್ವಜನಿಕರಿಗೆ ಯಾವುದೇ ಗೊಂದಲವಾಗದಂತೆ ಕ್ರಮವಹಿಸಬೇಕು. ಉಪ-ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್, ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಬಮೂಲ್ ಅಧ್ಯಕ್ಷರಾದ ಶ್ರೀ ಡಿ.ಕೆ. ಸುರೇಶ್, ಶಾಸಕರಾದ ಶ್ರೀ ರಿಜ್ವಾನ್ ಅರ್ಷದ್, ಶ್ರೀ ಎ.ಸಿ. ಶ್ರೀನಿವಾಸ್, ಎಂಎಲ್‌ಸಿಗಳಾದ ಶ್ರೀ ಪುಟ್ಟಣ್ಣ, ಶ್ರೀ ಶ್ರೀನಿವಾಸ್ ಮತ್ತಿತರರು ನಿಯೋಗದಲ್ಲಿದ್ದರು. #Bengaluru #GBA #RamalingaReddy #Karnataka #Election #GBAElection
Ramalinga Reddy tweet media
ಕನ್ನಡ
9
5
31
1.2K
Ramalinga Reddy
Ramalinga Reddy@RLR_BTM·
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು 🕉️ ಸರ್ವಶಕ್ತನಾದ ಶಿವನು ನಾಡಿನ ಸಮಸ್ತರ ಬಾಳಿನಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. #RamalingaReddy #Karnataka #Bengaluru #BTMLayout
Ramalinga Reddy tweet media
ಕನ್ನಡ
4
5
33
669
Ramalinga Reddy
Ramalinga Reddy@RLR_BTM·
ಅಫಜಲಪುರ ಮತಕ್ಷೇತ್ರದ ಪವಿತ್ರ ತಾಣ, ಶ್ರೀ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಅಧೀನದಲ್ಲಿರುವ ಶ್ರೀ ತಂತುಕೇಶ್ವರ ದೇವಸ್ಥಾನದ 'ಅನ್ನದಾಸೋಹ ಭವನ'ಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿ ಹಾಗೂ ತಂತುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಮಸ್ತ ಜನರ ಸುಖ-ಸಂತೋಷಕ್ಕಾಗಿ ಪ್ರಾರ್ಥಿಸಿದೆ. 📍 ಅಭಿವೃದ್ಧಿ ಸಂಕಲ್ಪ: ಗಾಣಗಾಪುರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸಿದ್ಧಪಡಿಸಲಾದ 'ಮಾಸ್ಟರ್ ಪ್ಲಾನ್' ಅನ್ನು ಪರಿಶೀಲಿಸಲಾಯಿತು. ಸ್ಥಳೀಯ ಮುಖಂಡರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಬಜೆಟ್‌ನಲ್ಲಿ ವಿಶೇಷ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. 📍 ಭಕ್ತಾದಿಗಳ ಸೌಲಭ್ಯ: ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರಿಗೆ ಇನ್ನಷ್ಟು ಸುಸಜ್ಜಿತ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. 📍 ದಾನಿಗಳಿಗೆ ಗೌರವ: ಅನ್ನದಾಸೋಹ ಭವನ ನಿರ್ಮಾಣಕ್ಕೆ ಉದಾರವಾಗಿ ಸಹಕರಿಸಿದ ದಾನಿಗಳಾದ ಶ್ರೀನಿವಾಸ ಕೋಣೆರ ದಂಪತಿಗಳನ್ನು ಈ ಸಂದರ್ಭದಲ್ಲಿ ಭಕ್ತಿಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಫಜಲಪುರದ ಶಾಸಕರಾದ ಶ್ರೀ ಎಂ.ವೈ. ಪಾಟೀಲ, ವಿಧಾನಪರಿಷತ್ ಸದಸ್ಯರಾದ ಶ್ರೀ ತಿಪ್ಪಣ್ಣಪ್ಪ ಕಮಕನೂರ, ಕೆ.ಕೆ.ಆರ್.ಟಿ.ಸಿ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಪಾಟೀಲ್, ಶ್ರೀ ಜಗದೇವ ಗುತ್ತೇದಾರ, ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು. #RamalingaReddy #Ganagapur #DattatreyaTemple #Kalaburagi
Ramalinga Reddy tweet mediaRamalinga Reddy tweet mediaRamalinga Reddy tweet mediaRamalinga Reddy tweet media
ಕನ್ನಡ
1
3
21
757
Ramalinga Reddy
Ramalinga Reddy@RLR_BTM·
ಬೆಂಗಳೂರಿನ ವಿಧಾನಸೌಧದ ಸಮೀಪವಿರುವ ಎಂ.ಎಸ್. ಬಿಲ್ಡಿಂಗ್ ಎದುರು, ಮುಜರಾಯಿ ಇಲಾಖೆಯ ಹೆಮ್ಮೆಯ ಸಂಕೇತವಾಗಿ ತಲೆಎತ್ತಲಿರುವ ‘ಧಾರ್ಮಿಕ ಸೌಧ’ ಕಟ್ಟಡಕ್ಕೆ ಅತ್ಯಂತ ಸಡಗರದಿಂದ ಗುದ್ದಲಿ ಪೂಜೆ ನೆರವೇರಿಸಿದೆ. ಈ ಯೋಜನೆಯ ವಿಶೇಷತೆಗಳು: ✨ ಭವ್ಯ ಹೊಯ್ಸಲ ವಾಸ್ತುಶಿಲ್ಪದಲ್ಲಿ ಸುಮಾರು 27.70 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. 🏛️ ಕಮಿಷನರ್ ಕಚೇರಿ, ನ್ಯಾಯಾಲಯದ ಸಭಾಂಗಣ, ಡಿಜಿಟಲ್ ಲೈಬ್ರರಿ ಮತ್ತು ಸುಸಜ್ಜಿತ ಆಡಿಟೋರಿಯಂ ಒಳಗೊಂಡಿರಲಿದೆ. 🙏 ರಾಜ್ಯದ 34,564 ಕ್ಕೂ ಹೆಚ್ಚು ದೇವಾಲಯಗಳ ಆಡಳಿತಾತ್ಮಕ ಕೆಲಸಗಳಿಗೆ ಇದು ಏಕೈಕ ಕೇಂದ್ರಬಿಂದುವಾಗಲಿದೆ. ನಮ್ಮ ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಕಾರ್ಯಕ್ಕೆ ಚಾಲನೆ ನೀಡಿದ್ದು ನನಗೆ ಹೆಮ್ಮೆಯ ವಿಷಯ. ಧಾರ್ಮಿಕ ದತ್ತಿ ಇಲಾಖೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ, ಆಯುಕ್ತರಾದ ಶ್ರೀ ಶರತ್, ಅನೇಕ ಹಿರಿಯ ಅರ್ಚಕರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. #RamalingaReddy #DharmikaSoudha #Bengaluru #NammaBengaluru #MuzraiDepartment ಕರ್ನಾಟಕ HoysalaArchitecture ReligiousEndowments
ಕನ್ನಡ
8
18
94
5.3K
Ramalinga Reddy
Ramalinga Reddy@RLR_BTM·
ಬೆಂಗಳೂರು ಮೆಟ್ರೋ (BMRCL) ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಅಧೀನಕ್ಕೆ ಬರುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ದರ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರವು 'ದರ ನಿಗದಿ ಸಮಿತಿ'ಯನ್ನು (Fare Fixation Committee) ರಚಿಸುತ್ತದೆ. ಈ ಸಮಿತಿಯು ನೀಡುವ ವರದಿಯ ಆಧಾರದ ಮೇಲೆ ದರಗಳು ನಿರ್ಧಾರವಾಗುತ್ತವೆ. ಪ್ರತಿಪಕ್ಷಗಳು ಮೆಟ್ರೋ ದರ ಏರಿಕೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವುದು ಸರಿಯಲ್ಲ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ತಾಂತ್ರಿಕ ಮತ್ತು ಕೇಂದ್ರದ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ. ಬಿಎಂಆರ್‌ಸಿಎಲ್ ಮೆಟ್ರೋ ದರ ನಿಗದಿಗಾಗಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿಯ ಸದಸ್ಯರ ಹೆಸರುಗಳು ಈ ಕೆಳಗಿನಂತಿವೆ: ನ್ಯಾಯಮೂರ್ತಿ ಆರ್. ಥಾರಣಿ - ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಈ ಸಮಿತಿಯ ಅಧ್ಯಕ್ಷರು. ಸತೀಂದರ್ ಪಾಲ್ ಸಿಂಗ್ - ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು. ಡಾ. ಇ.ವಿ. ರಮಣರೆಡ್ಡಿ (Retired IAS officer) - ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು. #RamalingaReddy #NammaMetro #Metro #BMRCL #Bengaluru #Karnataka
ಕನ್ನಡ
4
9
45
1.5K
Ramalinga Reddy
Ramalinga Reddy@RLR_BTM·
2026ರ ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್‌ಸಿಬಿ ಮಹಿಳಾ ತಂಡಕ್ಕೆ ಅಭಿನಂದನೆಗಳು. 🏆 #RCB #WPL2026 #Bengaluru #RamalingaReddy #Karnataka
Ramalinga Reddy tweet media
ಕನ್ನಡ
2
25
423
2.8K
Ramalinga Reddy
Ramalinga Reddy@RLR_BTM·
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾರಿಗೆ, ಗೃಹ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ-2026’ರ ಸಮಾರೋಪ ಮತ್ತು ‘ಇ-ಡಾರ್’ ಯೋಜನೆಯ ಅನುಷ್ಠಾನ ಸಮಾರಂಭದಲ್ಲಿ ಭಾಗವಹಿಸಿದೆ. ರಸ್ತೆ ಅಪಘಾತಗಳಲ್ಲಿ ನೊಂದ ಕುಟುಂಬಗಳು ಇನ್ಶುರೆನ್ಸ್ (ವಿಮೆ) ಹಣ ಪಡೆಯಲು ಹರಸಾಹಸ ಪಡುವುದನ್ನು ತಪ್ಪಿಸಲು ಇದೊಂದು ಶಾಶ್ವತ ಪರಿಹಾರವಾಗಿದೆ. ಇನ್ನು ಮುಂದೆ ಪೊಲೀಸ್, ಸಾರಿಗೆ ಮತ್ತು ಆರೋಗ್ಯ ಇಲಾಖೆಯ ಮಾಹಿತಿಗಳು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಿಗಲಿವೆ. ಇದರಿಂದ ವಿಮಾ ಕಂಪನಿಗಳು ತ್ವರಿತವಾಗಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಇದೇ ವೇಳೆ, ಮಹಿಳೆಯರು ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ‘ಆಟೋ ಚಾಲಕರ ಡಿಸ್ಪ್ಲೇ ಕಾರ್ಡ್’ ಗಳನ್ನು ಸಹ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್‌, ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ , ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ್ ರಾವ್, ಸಾರಿಗೆ ಆಯುಕ್ತರಾದ ಶ್ರೀ ಯೋಗೇಶ್, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. #Karnataka #RoadSafety #Insurance #RamalingaReddy
Ramalinga Reddy tweet mediaRamalinga Reddy tweet media
ಕನ್ನಡ
0
5
19
771