

Ramalinga Reddy
6.5K posts

@RLR_BTM
Transport & Muzrai Minister, Karnataka | Incharge Minister - Bengaluru South District (Ramanagara) | MLA - BTM Layout |





ಶಕ್ತಿ ಯೋಜನೆಯ ಹೊರೆದಿಂದ ನಿಶ್ಯಕ್ತಗೊಂಡಿರುವ ರಾಜ್ಯದ ಸಾರಿಗೆ ನಿಗಮಗಳು ಇಂದು ಸಂಪೂರ್ಣ ಕುಸಿತದ ಅಂಚಿಗೆ ತಲುಪಿವೆ. ಮೇ 20ರಿಂದ ಮತ್ತೊಮ್ಮೆ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವುದು @INCKarnataka ಸರ್ಕಾರದ ದಿವಾಳಿತನದ ಆಡಳಿತಕ್ಕೆ ಜೀವಂತ ಸಾಕ್ಷಿ. ಶೇ 25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದ ನೌಕರರಿಗೆ, ಏಕಪಕ್ಷೀಯವಾಗಿ ಕೇವಲ 12.5% ಹೆಚ್ಚಳ ಘೋಷಿಸಿರುವುದು ನೌಕರರ ಹೋರಾಟಕ್ಕೆ ಮಾಡಿದ ಅವಮಾನ. ಕೇವಲ ಚುನಾವಣಾ ಲಾಭಕ್ಕಾಗಿ ಗ್ಯಾರೆಂಟಿಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸ ಖಾಲಿ ಮಾಡಿದ @siddaramaiah ಸರ್ಕಾರಕ್ಕೆ, ಈಗ ನೌಕರರ ಸಂಬಳಕ್ಕೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಚಿವ @RLR_BTM ಅವರು ನೌಕರರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ದಿವ್ಯ ಮೌನ ವಹಿಸಿರುವುದು ಸರ್ಕಾರದ ನಿರ್ಲಕ್ಷ್ಯ ಮತ್ತು ಅಸಮರ್ಥತೆಯ ಪರಾಕಾಷ್ಠೆ. ಸಾರಿಗೆ ನೌಕರರು ಪದೇ ಪದೇ ಬೀದಿಗಿಳಿದರೂ Dont Care ಎನ್ನದಿರುವ ಕಾಂಗ್ರೆಸ್ ಸರ್ಕಾರ ತನ್ನ ಕಾರ್ಮಿಕ ವಿರೋಧಿ ಧೋರಣೆಯನ್ನ ಈಗಾಗಲೇ ಅನೇಕ ಸಲ ಪ್ರದರ್ಶನ ಮಾಡಿದೆ. ಈಗ ನೌಕರರ ಮುಷ್ಕರದಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಬುಡಮೇಲು ಆಗುತ್ತಿದ್ದರೂ ಕ್ಯಾರೆ ಅನ್ನದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಂಡು ನೌಕರರನ್ನು ಕೆರಳಿಸುತ್ತಿರುವುದು ಕನ್ನಡಿಗರ ದುರಂತ.

































ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಷ್ಕರ, ಪ್ರತಿಭಟನೆಗಳು ಸಾಮಾನ್ಯವಾಗಿದೆ. @INCKarnataka ಸರ್ಕಾರದ ಆಡಳಿತಕ್ಕೆ ರಾಜ್ಯವೇ ರೋಸಿ ಹೋಗಿದೆ. ಅಡಿಗಡಿಗೆ ಪ್ರತಿಭಟನೆ, ಮುಷ್ಕರ ನಡೆಯುತ್ತಿದೆ. ಕಾಂಗ್ರೆಸ್ ಜಾರಿಗೊಳಿಸಿರುವ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಶಕ್ತಿಯಿಂದಾಗಿ ಸಾರಿಗೆ ಇಲಾಖೆಯ ನೌಕರರು ಹೈರಾಣಾಗಿದ್ದಾರೆ. ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಯ ಶಕ್ತಿ ಕುಂದಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಏಳಿಗೆಯ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತವನ್ನು ಸರ್ಕಾರ ತಲುಪಿರುವುದು ದುರಂತವೇ ಸರಿ. ಸರ್ಕಾರದ ಬೇಜವಾಬ್ದಾರಿ ನಡೆಯಿಂದ ಆಕ್ರೋಶಗೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರ ನಡೆಸಲು ನಿರ್ಧರಿಸಿದೆ. ತಮ್ಮ ಬೇಡಿಕೆ ಈಡೇರದಿದ್ದರೆ ಮೇ 20ರ ನಂತರ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಸಾರಿಗೆ ನೌಕರರು ತಿಳಿಸಿದ್ದಾರೆ. ಮುಖ್ಯಮಂತ್ರಿ @siddaramaiah ಸರ್ಕಾರದ ತುಘಲತ್ ಆಡಳಿತದಿಂದಾಗಿ ರಾಜ್ಯದ ಜನತೆ ಮತ್ತೊಮ್ಮೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. #CongressFailsKarnataka





