
ಶ್ರೀ ನಿಟ್ಟೆ ವಿನಯ ಹೆಗ್ಡೆಯವರು ನಾಡು ಕಂಡ ವಿಶಿಷ್ಟ ಶೈಕ್ಷಣಿಕ ಹರಿಕಾರ. ರಾಷ್ಟ್ರದ ಉನ್ನತಿಗೆ ಶಿಕ್ಷಣವೇ ಬುನಾದಿ ಎನ್ನುವ ನಿಲುವಿನೊಡನೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಔದ್ಯಮಿಕ ಕ್ಷೇತ್ರದಲ್ಲೂ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದವರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾದವರು. ಕ್ರೀಡಾಕ್ಷೇತ್ರಕ್ಕೂ ಕೊಡುಗೆ ಕೊಟ್ಟವರು. ಅವರ ನಿಧನ ನಿಜವಾಗಿಯೂ ಶೂನ್ಯವನ್ನು ಸೃಷ್ಟಿಸಿದೆ. ಆ ಜೀವಕ್ಕೆ ಸದ್ಗತಿಯ ಆಕಾಂಕ್ಷೆ.

ಕನ್ನಡ


















