
"ಪ್ರಶಿಕ್ಷಣದಲ್ಲಿ ಸಕಾರಾತ್ಮಕ ರಾಜಕಾರಣ ಮಾಡುವುದನ್ನು ಕಲಿಯಬೇಕು"
ಚಿಕ್ಕಬಳ್ಳಾಪುರದಲ್ಲಿ ಏರ್ಪಡಿಸಿದ್ದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ರ ಅಂಗವಾಗಿ ನಡೆದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಂಡು ಮಾತನಾಡಿದೆನು.
ಪಂಡಿತ್ ದೀನದಯಾಳ ಉಪಾಧ್ಯಾಯರು ಜನಸಂಘವನ್ನು ಕಟ್ಟಿದರು. ಅದರ ಮೊದಲನೇ ಅಧ್ಯಕ್ಷರಾಗಿದ್ದರು. ಅವರಿಗೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದು ಒಂದು. ಚುನಾವಣೆಗೆ ಅಥವಾ ಒಂದು ರಾಜಕೀಯ ಪಕ್ಷ ಕಟ್ಟಿದರೆ ಸಾಲದು ರಾಷ್ಟ್ರೀವಾದಿ ರಾಜಕೀಯ ಪಕ್ಷ ಕಟ್ಟಬೇಕು. ರಾಜಕಾರಣ ಮಾಡುವುದೇ ರಾಷ್ಟ್ರಕ್ಕಾಗಿ, ಭಾರತ ಮಾತೆಗೋಸ್ಕರ ರಾಜಕಾರಣ ಮಾಡಬೇಕು. ಆದರೆ, ಈ ವಿಚಾರವನ್ನು ಸ್ವಾತಂತ್ರ ಬಂದಾಗ ಹೇಳುವುದು ಕಷ್ಟವಾಗಿತ್ತು. ಆಗ ಬಿಜೆಪಿ ನಾಯಕರಿಗೆ ಪ್ರಶಿಕ್ಷಣ ವರ್ಗದ ಮೂಲಕ ಪಕ್ಷವನ್ನು ಕಟ್ಟುವ ದೀನದಯಾಳ ಉಪಾಧ್ಯಾಯ ಅವರ ಯುಕ್ತಿಯಿಂದ ಬಂದಿದೆ. ಹೇಗೆ ಒಬ್ಬ ವ್ಯಕ್ತಿ ಜೀವನದ ಉದ್ದಕ್ಕೂ ವಿದ್ಯಾರ್ಥಿ ಆಗಿರುತ್ತಾನೆ. ಅವರು ಯಶಸ್ವಿಯಾಗುತ್ತಾರೆ. ನಾನು ಡಿಗ್ರಿ ಮುಗಿಸಿದ್ದೇನೆ ಎಂದು ಬಿಟ್ಟರೆ ಅವರು ಯಶಸಿಯಾಗುವುದಿಲ್ಲ. ರಾಜಕೀಯ ಪಕ್ಷದಲ್ಲಿ ಕೂಡ ಕಾರ್ಯಕರ್ತರು ರಾಜಕಾರಣ ತಿಳಿದುಕೊಂಡು ಅದನ್ನು ಜನಪರವಾಗಿ ಇರುವಂತ ರಾಜಕಾರಣ ಮಾಡುವ ಮೂಲಕ ಅನುಭವ ಪಡೆದುಕೊಂಡಾಗ ನಾಯಕತ್ವ ಬರುತ್ತದೆ.
ಕಾರ್ಯಕ್ರಮದಲ್ಲಿ ಸಂಸದ @DrSudhakar_ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.




ಕನ್ನಡ









