ದೇಶ, ಧರ್ಮದ ಪರ ಸದಾ ಕಾಲ ಗಟ್ಟಿ ಧ್ವನಿಯಾಗಿ ನಿಂತು, ಲಕ್ಷಾಂತರ ಯುವಕರ ಪ್ರೇರಣೆಯ ಶಕ್ತಿಯಾಗಿ, ಯುವಕರ ಎದೆಯಲ್ಲಿ ದೇಶಭಕ್ತಿ, ಮನಸ್ಸಿನ ಆಧ್ಯಾತ್ಮಿಕ ಶಕ್ತಿಯನ್ನು ತುಂಬುತ್ತಿರುವ ಗುರು ಶ್ರೀ @astitvam ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
#YuvaBrigade
ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ನಾಯಕ, ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ನನ್ನ ಅನಂತ ಕೋಟಿ ನಮನಗಳು
#BabuJagjeevanRam
Heartily welcomed our senior leader and Hon’ble Union Home Minister, Shri Amit Shah Ji, at HAL Airport on his arrival in Bengaluru today.
With his unmatched leadership and sharp electoral strategies, Shri @AmitShah Ji continues to inspire crores of party karyakartas across the nation. His visit to the state has infused renewed energy and enthusiasm among every karyakarta of @BJP4Karnataka. Under his guidance, we remain committed to strengthening the party further in the state and effectively taking on upcoming challenges, including the by-elections.
ಬೆಂಗಳೂರಿಗೆ ಇಂದು ಆಗಮಿಸಿದ ನಮ್ಮೆಲ್ಲರ ಹಿರಿಯ ನಾಯಕರು, ಮಾರ್ಗದರ್ಶಕರು, ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜೀ ರವರನ್ನು ಆದರಪೂರ್ವಕವಾಗಿ ಸ್ವಾಗತಿಸಲಾಯಿತು.
ತಮ್ಮ ಅಪ್ರತಿಮ ದಿಟ್ಟ ನಾಯಕತ್ವ, ಚುನಾವಣಾ ಕಾರ್ಯತಂತ್ರಗಳ ಮೂಲಕ ಪಕ್ಷದ ಕೋಟಿ ಕೋಟಿ ಕಾರ್ಯಕರ್ತರ ಸ್ಪೂರ್ತಿಯಾಗಿರುವ ಶ್ರೀ ಅಮಿತ್ ಶಾ ಜೀ ರವರು ರಾಜ್ಯಕ್ಕೆ ಆಗಮಿಸಿರುವುದು ಪ್ರತಿಯೊಬ್ಬ ಕಾರ್ಯಕರ್ತನಲ್ಲೂ ಹೊಸ ಹುರುಪು, ನವ ಚೈತನ್ಯ ತುಂಬಿದೆ. ಅವರ ಮಾರ್ಗದರ್ಶನದಲ್ಲಿ 'ಸದೃಢ ಸಂಘಟನೆ - ಸಮರ್ಪಿತ ಜನಸೇವೆ'ಯ ನಮ್ಮ ಸಂಕಲ್ಪಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.
ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಉಪಚುನಾವಣೆ ಸೇರಿದಂತೆ ಎಲ್ಲ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಅವರ ದಕ್ಷ ಮಾರ್ಗದರ್ಶನದಂತೆಯೇ ನಾವು ಮುನ್ನಡೆಯಲಿದ್ದೇವೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi , ಸಂಸದರಾದ ಶ್ರೀ @PCMohanMP ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಮೈಕ್ ಸಿಕ್ಕರೆ ಸಾಕು ಡಾಲರ್, ಜಿಡಿಪಿ ಎಂದು ಪುಂಗುವ ಪುಂಗಿವೀರ @SantoshSLadINC ಅವರೇ,
ಮೊದಲು ನಿಮ್ಮ ಕ್ಷೇತ್ರದ ದಲಿತ ಕುಟುಂಬವೊಂದು ಖಾಸಗಿ ಬ್ಯಾಂಕ್ನ ಅಮಾನವೀಯ ನಡೆಯಿಂದ ಬೀದಿಯಲ್ಲಿ ಬದುಕು ಸಾಗಿಸುವಂತಾಗಿದೆ. ನಿಮ್ಮ ಒಣಪಾಂಡಿತ್ಯ ಪ್ರದರ್ಶನದ ಮಾತುಗಳು ಬಡವರ ಹೊಟ್ಟೆ ತುಂಬಿಸುವುದಿಲ್ಲ. ಕೂಡಲೇ, ನೊಂದ ಕುಟುಂಬಕ್ಕೆ ಆಶ್ರಯ ಮತ್ತು ನ್ಯಾಯ ಕೊಡಿಸುವ ಕೆಲಸ ಮಾಡಿ.
#CongressFailsKarnataka
ಜನಸೇವೆಯೇ ಗುರಿ, ಪಕ್ಷದ ಸಿದ್ಧಾಂತಗಳೇ ಧ್ಯೇಯ, ಸಂಘಟನೆಯೇ ಶಕ್ತಿ!
ಕಲಬುರಗಿ ದಕ್ಷಿಣ ಮಂಡಲ ವತಿಯಿಂದ ಹಮ್ಮಿಕೊಂಡಿರುವ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪಕ್ಷದ ಸಂಘಟನೆ ಹಾಗೂ ಪ್ರಶಿಕ್ಷಣ ವರ್ಗದ ಕುರಿತು ಮಾತನಾಡಲಾಯಿತು.
ಅಜ್ಜಿ, ಶತಾಯುಷಿ ಮಾತೋಶ್ರೀ ವೀರಮ್ಮ ಗಳಂಗಪ್ಪ ಪಾಟೀಲ್ ಅವರ 100ನೇ ವರ್ಷದ ಜನ್ಮದಿನವನ್ನು ಇಡೀ ಪರಿವಾರದೊಂದಿಗೆ ಆಚರಿಸಲಾಯಿತು. ಅಜ್ಜಿ ಅವರ ಜೀವನ ನಮಗೆ ಮಾದರಿಯಾಗಿದ್ದು, ಸುದೀರ್ಘ ಶತಾಯುಷಿ ಜೀವನವನ್ನು ಪೂರ್ಣಗೊಳಿಸಿರುವ ಅವರಿಗೆ ಗೌರವ ಸಲ್ಲಿಸಿ, ಅವರಿಂದ ಸ್ಫೂರ್ತಿ ಪಡೆಯಲು ಎಸ್ಬಿ ಪಾಟೀಲ್ ಪರಿವಾರದಿಂದ ಜನ್ಮಶತಮಾನೋತ್ಸವ ಏರ್ಪಡಿಸಿ,
ಅಹಿಂಸೆ, ಶಾಂತಿಯ ಮಹತ್ವವನ್ನು ತಿಳಿಸಿದ ಮಹಾವೀರರ ಆದರ್ಶಗಳು ಸಾರ್ವಕಾಲಿಕವಾಗಿವೆ. ʼಅಹಿಂಸೆಯೇ ಶ್ರೇಷ್ಠ ಧರ್ಮʼ ವೆಂದು ಅವರು ಇಡೀ ವಿಶ್ವಕ್ಕೆ ಸಾರಿದವರು.
ನಾಡಿನ ಸಮಸ್ತ ಜನತೆಗೆ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.
#MahavirJayanthi#chandupatil#chandupatilbjp
ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಸರ್ಕಾರಕ್ಕೆ ಧಿಕ್ಕಾರ...
ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು, ಕೆಪಿಎಸ್ಸಿಯಲ್ಲಿ ಅಕ್ರಮ ತನಿಖೆಗೆ ಸಿಬಿಐಗೆ ವಹಿಸಬೇಕು ಎಂಬುದು ಸೇರಿದಂತೆ ರಾಜ್ಯದ ವಿದ್ಯಾರ್ಥಿಗಳ ಸಂಘಟನೆಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಬೆಂಬಲಿಸಲಾಯಿತು.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ |
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||
ರಾಮನವಮಿಯ ಪ್ರಯುಕ್ತ ನಮ್ಮ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀರಾಮನ ಆಶೀರ್ವಾದದಿಂದ ನಮ್ಮ ದೇಶ ಧರ್ಮ, ಸಂಸ್ಕೃತಿ ಮತ್ತು ಸನಾತನ ಮೌಲ್ಯಗಳು ಇನ್ನಷ್ಟು ಬಲವಾಗಲಿ.