M B Patil

19.3K posts

M B Patil banner
M B Patil

M B Patil

@MBPatil

Minister for Commerce & Industries, Infrastructure GoK | Educationist-Engineer-Basava Literature Enthusiast

ವಿಜಯಪುರ - Vijayapura, India Katılım Ekim 2014
1.4K Takip Edilen115.8K Takipçiler
Sabitlenmiş Tweet
M B Patil
M B Patil@MBPatil·
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes! An incredible story of a people’s movement: 1.5 crore trees planted, raising forest cover from just 0.17% to 2%. A true testament to political will, systemic action & the power of collective participation. Proud that Vijayapura’s green success is inspiring the world! My heartfelt thanks to all the stakeholders and the people of Vijayapura. nytimes.com/card/2025/09/0…
M B Patil tweet mediaM B Patil tweet mediaM B Patil tweet mediaM B Patil tweet media
English
127
329
1.8K
174.2K
M B Patil
M B Patil@MBPatil·
ಬೆಂಗಳೂರಿನ ಆಗಸ ಮತ್ತಷ್ಟು ವಿಸ್ತಾರ: ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ದಿಟ್ಟ ಹೆಜ್ಜೆ! ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ KSIIDC ಮತ್ತೊಂದು ದಿಟ್ಟ ಹೆಜ್ಜೆ ಯನ್ನು ಇರಿಸಿದೆ. ನಗರದ ಹೊರವಲಯದಲ್ಲಿ ಆಯ್ಕೆ ಮಾಡಲಾದ 3 ಸ್ಥಳಗಳನ್ನು ಎಎಐ (ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ) ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಅನೇಕ ವಿಷಯಗಳ ಕುರಿತು ಪ್ರಸ್ತಾಪ ಮಾಡಿ, ಈ ಸ್ಥಳಗಳಲ್ಲಿರುವ ಸವಾಲುಗಳ ಕುರಿತು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ವಿವರವಾದ ಕಾರ್ಯತಂತ್ರ ಮತ್ತು ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಈ ಟೆಂಡರ್'ನಲ್ಲಿ 3-4 ಸಂಸ್ಥೆಗಳು ಭಾಗವಹಿಸಿದ್ದು, ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅವರು ಸಲ್ಲಿಸುವ ವರದಿಯ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತಾವಿತ ಹೊಸ ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. #2ndairportforbengaluru
ಕನ್ನಡ
2
5
47
1.7K
M B Patil
M B Patil@MBPatil·
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! ಹೊಸ ಸಂವತ್ಸರವು ಹೊಸ ಆಶೆಗಳು, ಹೊಸ ಕನಸುಗಳು ಮತ್ತು ಹೊಸ ಸಾಧನೆಗಳ ದಾರಿ ತೆರೆಯಲಿ. ಜೀವನದ ಸಿಹಿ-ಕಹಿ ಅನುಭವಗಳ ಮಧ್ಯೆ ದೃಢ ಸಂಕಲ್ಪದೊಂದಿಗೆ ಮುಂದೆ ಸಾಗುವ ಶಕ್ತಿಯನ್ನು ಈ ಯುಗಾದಿ ನಮ್ಮೆಲ್ಲರಲ್ಲೂ ತುಂಬಲಿ. #ಯುಗಾದಿ #Yugadi2026
ಕನ್ನಡ
3
8
50
1.4K
M B Patil
M B Patil@MBPatil·
ಅಲ್ಲಮಪ್ರಭು ಜಯಂತಿಯ ಪವಿತ್ರ ಸಂದರ್ಭದಲ್ಲಿ ಮಹಾನ್ ಶರಣ ಸಂತ ಅಲ್ಲಮಪ್ರಭುಗಳಿಗೆ ಭಕ್ತಿಪೂರ್ವಕ ನಮನಗಳು. ಕಾಯಕಯೋಗಿ ಬಸವಣ್ಣನವರ ಅನುಭವ ಮಂಟಪದ ಮೊಟ್ಟಮೊದಲ ಅಧ್ಯಕ್ಷರಾಗಿ ಆಧ್ಯಾತ್ಮಿಕ ಚಿಂತನೆಗೆ ದಿಕ್ಕು ತೋರಿದ ಮಹಾನ್ ತತ್ವಜ್ಞಾನಿ. ಸಾಮಾಜಿಕ ಅಸಮಾನತೆ, ಅಂಧಶ್ರದ್ಧೆ ಮತ್ತು ಮೌಢ್ಯಗಳ ವಿರುದ್ಧ ಧೈರ್ಯವಾಗಿ ನಿಂತ ಅಲ್ಲಮಪ್ರಭುಗಳು “ಅಂತರಂಗ ಶುದ್ಧಿಯೇ ನಿಜವಾದ ಭಕ್ತಿ” ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿದ್ದಾರೆ. ಅವರ ವಚನಗಳು ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರುವುದರ ಜೊತೆಗೆ ಭಕ್ತಿ, ತತ್ವಜ್ಞಾನ ಮತ್ತು ಜೀವನದ ನಿಜಾರ್ಥವನ್ನುಸಾರುವ ದಿವ್ಯ ಜ್ಯೋತಿಯಾಗಿವೆ. ಅಲ್ಲಮಪ್ರಭುಗಳ ತತ್ವಚಿಂತನೆಗಳು ಮಾನವ ಕುಲಕ್ಕೆ ನಿರಂತರ ಪ್ರೇರಣೆಯಾಗಿವೆ. #ಅಲ್ಲಮಪ್ರಭುಜಯಂತಿ #ಅಲ್ಲಮಪ್ರಭು
M B Patil tweet media
ಕನ್ನಡ
0
11
56
851
M B Patil
M B Patil@MBPatil·
ನಲಿವಿನ ತಾಣವಾದ ರಾಂಪುರ ಸರ್ಕಾರಿ ಶಾಲೆ: ಮಕ್ಕಳ ಮುಖದಲ್ಲಿ ಅರಳಿದ ನಗು! ತಿಕೋಟಾ ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನೂತನ ಆಟೋಪಕರಣಗಳನ್ನು ಅಳವಡಿಸಲಾಗಿದೆ. ಜಾರುವ ಬಂಡೆ, ಉಯ್ಯಾಲೆ, ತಿರುಗುಣಿ ಹೀಗೆ ವಿವಿಧ ಆಟೋಪಕರಣಗಳಲ್ಲಿ ಆಟವಾಡುತ್ತಿರುವ ಮಕ್ಕಳ ಮೊಗದಲ್ಲಿ ಸಂತಸ ಮನೆಮಾಡಿದೆ. ಶಾಲೆ ಅಂದರೆ ಕೇವಲ ನಾಲ್ಕು ಗೋಡೆಗಳಲ್ಲ, ಅದು ಮಕ್ಕಳ ಕನಸುಗಳು ಚಿಗುರುವ ನಂದನವನವಾಗಬೇಕು ಎಂಬುದು ನಮ್ಮ ಆಶಯ. ಈ ನೂತನ ಸೌಲಭ್ಯವು ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಮತ್ತು ಕಲಿಕೆಯ ಜೊತೆಗೆ ದೈಹಿಕವಾಗಿ ಸದೃಢರಾಗಲು ಸಹಕಾರಿ!
M B Patil tweet mediaM B Patil tweet mediaM B Patil tweet media
ಕನ್ನಡ
0
7
39
772
M B Patil
M B Patil@MBPatil·
ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರು, ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮಾಜ ಸೇವೆ ಮಾಡಲು ಹೆಚ್ಚಿನ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. #MahilaCongress @KarnatakaPMC @Sowmyareddyr
M B Patil tweet media
ಕನ್ನಡ
0
7
49
776
M B Patil
M B Patil@MBPatil·
ರಾಜ್ಯ ಉನ್ನತ ಶಿಕ್ಷಣ ಸಚಿವರು, ಆತ್ಮೀಯರಾದ ಡಾ. ಎಂ.ಸಿ. ಸುಧಾಕರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮಾಜ ಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. @drmcsudhakar
M B Patil tweet media
ಕನ್ನಡ
0
8
58
811
M B Patil
M B Patil@MBPatil·
ಸಮಗ್ರ ಕರ್ನಾಟಕದಲ್ಲಿ ಹೂಡಿಕೆ & ಉದ್ಯೋಗ ಸೃಷ್ಟಿ ನಿರಂತರ ನಮ್ಮ ಸರ್ಕಾರದ ಕೈಗಾರಿಕಾ ಸ್ನೇಹಿ ನೀತಿಗಳು ಮತ್ತು ದೃಢ ನಿರ್ಧಾರಗಳ ಫಲವಾಗಿ, 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ 14,525ಕ್ಕೂ ಅಧಿಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದು, 13 ಜಿಲ್ಲೆಗಳಲ್ಲಿ ಕೈಗಾರಿಕಾ ವಿಸ್ತರಣೆ ಮತ್ತು 37 ಹೊಸ ಕೈಗಾರಿಕೆಗಳ ಸ್ಥಾಪನೆ ಮೂಲಕ ಸಮಗ್ರ ಅಭಿವೃದ್ಧಿಯ ದಿಕ್ಕಿನಲ್ಲಿ ನಾವು ಮತ್ತೊಂದು ಬಲವಾದ ಹೆಜ್ಜೆ ಇಟ್ಟಿದ್ದೇವೆ. ₹50 ಕೋಟಿ ಮೀರಿದ 22 ಯೋಜನೆಗಳಿಂದ ₹3,908.68 ಕೋಟಿ ಹೂಡಿಕೆ ಹಾಗೂ 12,475 ಉದ್ಯೋಗಗಳು, ₹15–₹50 ಕೋಟಿ ನಡುವಿನ 15 ಯೋಜನೆಗಳಿಂದ ₹350.60 ಕೋಟಿ ಹೂಡಿಕೆ ಮತ್ತು 1,750 ಉದ್ಯೋಗಗಳು, ಜೊತೆಗೆ 2 ಹೆಚ್ಚುವರಿ ಯೋಜನೆಗಳಿಂದ ₹565.03 ಕೋಟಿ ಹೂಡಿಕೆ ಹಾಗೂ 300 ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಪ್ರತಿ ಜಿಲ್ಲೆಗೂ ಕೈಗಾರಿಕೆ, ಪ್ರತಿ ಮನೆಗೂ ಉದ್ಯೋಗ — ಇದು ಕೇವಲ ಘೋಷಣೆ ಅಲ್ಲ, ನಮ್ಮ ಸರ್ಕಾರ ಯಶಸ್ವಿಯಾಗಿ ಸಾಕಾರಗೊಳಿಸುತ್ತಿರುವ ದೃಢ ಸಂಕಲ್ಪ! #InvestKarnataka #BeyondBengaluru
M B Patil tweet media
ಕನ್ನಡ
9
9
32
938
M B Patil
M B Patil@MBPatil·
ಎಸ್ಎಸ್ಎಲ್’ಸಿ ಪರೀಕ್ಷೆ ಎದುರಿಸುತ್ತಿರುವ ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು ಭಯಕ್ಕೆ ಜಾಗ ಕೊಡಬೇಡಿ… ಆತ್ಮವಿಶ್ವಾಸವೇ ನಿಮ್ಮ ಶಕ್ತಿ! ನಿಮ್ಮ ಪರಿಶ್ರಮ, ನಿಮ್ಮ ಹಠ, ನಿಮ್ಮ ಗುರಿಯ ಮೇಲೆ ಇರುವ ನಂಬಿಕೆ, ಆ ಎಲ್ಲವೂ ಫಲ ಕೊಡುವ ಕ್ಷಣ ಬಂದಿದೆ. ಧೈರ್ಯವಾಗಿ ಬರೆಯಿರಿ… ಯಶಸ್ಸು ನಿಮ್ಮದೇ! #allthebest #SSLCExam
M B Patil tweet media
ಕನ್ನಡ
2
7
34
730
M B Patil
M B Patil@MBPatil·
ಅದ್ವೈತವ ನುಡಿದು ಅಬದ್ಧ ಅಂಗಕ್ಕಾಗಿ ಬದ್ಧರ ಬಾಗಿಲಲ್ಲಿ ಹೊದ್ದುಕೊಂಬನರಫಲ್ಲಾ ಎಂದು ಮತ್ತೆ ಅದೈತಕ್ಕೆ ಕದ್ದೆಹತನವೆ ? ಇಂತೀ ಅಬದ್ಧರ ಕಂಡು ಮುನ್ನವೆ ಹೊದ್ದಬೇಡ, ಎಂದನಂಬಿಗ ಚೌಡಯ್ಯ - ಅಂಬಿಗರ ಚೌಡಯ್ಯ
ಕನ್ನಡ
0
8
22
806
M B Patil
M B Patil@MBPatil·
ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ದೆಹಲಿಯ ಕರ್ನಾಟಕ ಭವನದಲ್ಲಿ ಇಂದು ನಡೆದ ರಾಜ್ಯದ ನೀರಾವರಿ ಯೋಜನೆಗಳ ಕಾನೂನು ತಜ್ಞರು - ವಕೀಲರ ಸಭೆಯಲ್ಲಿ ಪಾಲ್ಗೊಂಡು ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ತುಂಗಭದ್ರಾ, ಮೇಕೆದಾಟು ಯೋಜನೆಗಳ ಬಗ್ಗೆ, ಅಡೆತಡೆಗಳ ನಿವಾರಣೆಗೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಸಚಿವರಾದ ಶ್ರೀ ಹೆಚ್.ಕೆ. ಪಾಟೀಲ್‌, ಶ್ರೀ ಎನ್.ಎಸ್. ಬೋಸರಾಜು, ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ. ಜಯಚಂದ್ರ ಮತ್ತಿತರ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
M B Patil tweet mediaM B Patil tweet media
ಕನ್ನಡ
1
7
51
1.5K
M B Patil
M B Patil@MBPatil·
ಮಂಡ್ಯದಲ್ಲಿ ಸ್ಥಾಪನೆ ಆಗಲಿರುವ ARAI ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಜಮೀನು ನೀಡುವುದಾಗಿ ಈಗಾಗಲೇ ತಿಳಿಸಿದ್ದೆವು, ಅದರಂತೆ ಈ ಸ್ಥಳ ಪರಿಶೀಲನೆ ನಡೆಯುತ್ತಿದೆ. ನಮ್ಮ KIADB ಅಧಿಕಾರಿಗಳು, ARAI ಸಂಸ್ಥೆಯ ಅಧಿಕಾರಿಗಳೊಂದಿಗೆ ತೆರಳಿ ಯೋಜನೆಗೆ ಸೂಚಿಸಿದ ಜಾಗದ ಪರಿವೀಕ್ಷಣೆಯಲ್ಲಿ ಪಾಲ್ಗೊಂಡಿದ್ದಾರೆ. ಯೋಜನೆಯ ಅನುಷ್ಠಾನದಲ್ಲಿ ಸೂಕ್ತ ಸಹಭಾಗಿತ್ವ-ಸಹಕಾರ ನೀಡುತ್ತಿದ್ದೇವೆ. ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸರ್ಕಾರದ ಹಾಗೂ ನಮ್ಮ ಇಲಾಖೆಯ ಬೆಂಬಲ ಸದಾ ಇರಲಿದೆ.
Janata Dal Secular@JanataDal_S

ಮಂಡ್ಯದಲ್ಲಿ ಸ್ಥಾಪನೆ ಆಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರದ ವೈಶಿಷ್ಟ್ಯಗಳು 1. ಇದು ಸಂಪೂರ್ಣ ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆ. 2. ಮಂಡ್ಯದ ಸಂಸದರು ಹಾಗೂ ಕೇಂದ್ರದ ಬೃಹತ್‌ ಕೈಗಾರಿಕೆ-ಉಕ್ಕು ಸಚಿವರಾದ ಶ್ರೀ @hd_kumaraswamy ಅವರು ನಿರ್ವಹಿಸುವ ಬೃಹತ್‌ ಕೈಗಾರಿಕೆ ಸಚಿವಾಲಯದ ಅಧೀನದ ಸಂಸ್ಥೆ 3. ಕರ್ನಾಟಕದ ಆಟೋಮೊಬೈಲ್‌ ಕ್ಷೇತ್ರಕ್ಕೆ ಬೂಸ್ಟರ್‌ ಆಗಲಿದೆ. 4. ಆರಂಭಿಕ ಹಂತದಲ್ಲಿ ₹ 500 ಕೋಟಿ, ನಂತರ ₹ 500 ಕೋಟಿ; ಒಟ್ಟು ₹ 1,000 ಕೋಟಿಗೂ ಹೆಚ್ಚು ಹೂಡಿಕೆ. 5. ಮಂಡ್ಯ ಜಿಲ್ಲೆಗೆ ಬರುತ್ತಿರುವ ಪ್ರಪ್ರಥಮ ಕೇಂದ್ರ ಸರಕಾರಿ ಉದ್ಯಮ ಸಂಸ್ಥೆ. 6. ಇದು ಸಂಶೋಧನೆ, ಪರೀಕ್ಷಾ ಕೇಂದ್ರ ಸಕ್ಕರೆನಾಡಿಗೆ ಶ್ರೀ @narendramodi ಸರಕಾರದ ಅಕ್ಕರೆಯ ಕಾಣಿಕೆ; ವಿಸಿ ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಬಿದ್ದ ಎರಡೇ ದಿನದಲ್ಲಿ ಮಂಡ್ಯಕ್ಕೆ ಬಂದ #ARAI ತಂಡ! ನುಡಿದಂತೆ ನಡೆಯುವುದು ಎಂದರೆ ಹೀಗೆ.. #ARAI #MANDYA

ಕನ್ನಡ
2
12
124
8.1K
M B Patil
M B Patil@MBPatil·
New Momentum for Flights to Kalaburgi and Bidar Held a meeting at Vidhana Soudha today with ministers and airline representatives to push for regular air services to Kalaburgi and Bidar. Airlines including IndiGo, Air India, Alliance Air, Star Air and Akasa Air discussed feasibility and possible routes. Directed them to submit firm quotes and flight schedules for Bengaluru–Kalaburgi and Bengaluru–Bidar services by March 23. Improving regional air connectivity will open new opportunities for the people of Kalyana Karnataka and boost growth in the region.
M B Patil@MBPatil

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಬಲವಾದ ಹೆಜ್ಜೆ ಬೀದರ್ - ಕಲಬುರಗಿಗೆ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಸೂಚನೆ ವಿಧಾನಸೌಧದಲ್ಲಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಇಂಡಿಗೋ, ಏರ್ ಇಂಡಿಯಾ, ಅಲಯನ್ಸ್ ಏರ್, ಸ್ಟಾರ್ ಏರ್ ಹಾಗೂ ಆಕಾಶ ಏರ್ ಸಂಸ್ಥೆಗಳೊಂದಿಗೆ ನಡೆದ ಚರ್ಚೆಯಲ್ಲಿ ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು. 2019ರಲ್ಲಿ ಅಭಿವೃದ್ಧಿಪಡಿಸಲ್ಪಟ್ಟ 742 ಎಕರೆ ವ್ಯಾಪ್ತಿಯ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎಎಐ ನಿರ್ವಹಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಮಾನ ಸೇವೆಗಳನ್ನು ಆರಂಭಿಸುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಬೆಂಗಳೂರು–ಕಲಬುರಗಿ ಮತ್ತು ಬೆಂಗಳೂರು–ಬೀದರ ವಿಮಾನ ಸೇವೆಗಳ ಕುರಿತು ಖಚಿತ ಪ್ರಸ್ತಾವನೆ ಹಾಗೂ ವೇಳಾಪಟ್ಟಿಯನ್ನು ಮಾರ್ಚ್ 23ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಇಂದಿನ ಸಭೆಯಲ್ಲಿ ಸಚಿವರುಗಳಾದ ಡಾ. ಶರಣಪ್ರಕಾಶ್ ಆರ್. ಪಾಟೀಲ, ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ರಹೀಂ ಖಾನ್ ಹಾಗೂ ಕೆಕೆಆರ್’ಡಿಬಿ ಅಧ್ಯಕ್ಷರು ಮತ್ತು ಶಾಸಕರಾದ ಡಾ. ಅಜಯ್ ಸಿಂಗ್ ಅವರು ಭಾಗವಹಿಸಿ ಕಲಬುರಗಿ ಮತ್ತು ಬೀದರಕ್ಕೆ ನಿಯಮಿತ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಒತ್ತಾಯಿಸಿದರು. @PriyankKharge @ajaydharamsingh @S_PrakashPatil @RahimKhan_MLA

English
5
10
57
3K
M B Patil
M B Patil@MBPatil·
ನಾಡಿನ ಹೆಮ್ಮೆಯ ಕಲಾವಿದ, ಎಲ್ಲರ ಮನ ಗೆದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ #ಅಪ್ಪು ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ತಮ್ಮ ಅಮೋಘ ಅಭಿನಯದ ಮೂಲಕ ಕೋಟ್ಯಾಂತರ ಜನರ ಹೃದಯ ಗೆದ್ದಿದ್ದರು. ಅವರ ಸರಳತೆ, ಹೃದಯವಂತಿಕೆ ಮತ್ತು ಸೇವಾ ಮನೋಭಾವದ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ. ವೈಯಕ್ತಿಕವಾಗಿ ಅವರು ನಮ್ಮ ಕುಟುಂಬಕ್ಕೂ ಆತ್ಮೀಯರಾಗಿದ್ದರು. ಅವರ ನೆನಪುಗಳು ಮತ್ತು ಆದರ್ಶಗಳು ಸದಾ ಎಲ್ಲರ ಹೃದಯಗಳಲ್ಲಿ ಜೀವಂತವಾಗಿವೆ. #PuneethRajkumar #Appu
M B Patil tweet media
ಕನ್ನಡ
3
54
321
1.9K
M B Patil
M B Patil@MBPatil·
ತಮ್ಮ ಅನನ್ಯ ಗಗನಯಾನದ ಮೂಲಕ ಲಕ್ಷಾಂತರ ಜನರಿಗೆ ಸ್ಪೂರ್ತಿಯಾದ ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಜನ್ಮದಿನದಂದು ಗೌರವದ ನಮನಗಳು. ಅವರ ಸಾಧನೆಗಳು ವಿಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಕನಸುಗಳಿಗೆ ಹೊಸ ಗಗನ ತೆರೆದವು. ಪರಿಶ್ರಮ, ಧೈರ್ಯ ಮತ್ತು ದೃಢಸಂಕಲ್ಪದಿಂದ ಅಸಾಧ್ಯವೆನಿಸಿದ ಎತ್ತರಗಳನ್ನೂ ಮುಟ್ಟಬಹುದು ಎಂಬುದನ್ನು ಅವರು ಜಗತ್ತಿಗೆ ತೋರಿಸಿದರು. #KalpanaChawla #ಕಲ್ಪನಾಚಾವ್ಲಾ
M B Patil tweet media
ಕನ್ನಡ
0
10
40
703
M B Patil
M B Patil@MBPatil·
ಕನ್ನಡದ ಮೇರು ಸಾಹಿತಿ, ಚಿಂತಕ ಹಾಗೂ ಪದ್ಮಭೂಷಣ ಪುರಸ್ಕೃತ ಡಾ. ಡಿ.ವಿ. ಗುಂಡಪ್ಪ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಸಾಹಿತಿಯಾಗಿ, ಪತ್ರಕರ್ತರಾಗಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮಹನೀಯರು. ಅವರ ‘ಮಂಕುತಿಮ್ಮನ ಕಗ್ಗ’ ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿದ್ದು, ಪೀಳಿಗೆಯಿಂದ ಪೀಳಿಗೆಗೆ ಪ್ರೇರಣೆಯಾಗಿ ಉಳಿದಿದೆ. #DVG #ಡಿವಿಗುಂಡಪ್ಪ
M B Patil tweet media
ಕನ್ನಡ
0
5
33
521
M B Patil
M B Patil@MBPatil·
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಬಲವಾದ ಹೆಜ್ಜೆ ಬೀದರ್ - ಕಲಬುರಗಿಗೆ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಸೂಚನೆ ವಿಧಾನಸೌಧದಲ್ಲಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಇಂಡಿಗೋ, ಏರ್ ಇಂಡಿಯಾ, ಅಲಯನ್ಸ್ ಏರ್, ಸ್ಟಾರ್ ಏರ್ ಹಾಗೂ ಆಕಾಶ ಏರ್ ಸಂಸ್ಥೆಗಳೊಂದಿಗೆ ನಡೆದ ಚರ್ಚೆಯಲ್ಲಿ ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು. 2019ರಲ್ಲಿ ಅಭಿವೃದ್ಧಿಪಡಿಸಲ್ಪಟ್ಟ 742 ಎಕರೆ ವ್ಯಾಪ್ತಿಯ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎಎಐ ನಿರ್ವಹಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಮಾನ ಸೇವೆಗಳನ್ನು ಆರಂಭಿಸುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಬೆಂಗಳೂರು–ಕಲಬುರಗಿ ಮತ್ತು ಬೆಂಗಳೂರು–ಬೀದರ ವಿಮಾನ ಸೇವೆಗಳ ಕುರಿತು ಖಚಿತ ಪ್ರಸ್ತಾವನೆ ಹಾಗೂ ವೇಳಾಪಟ್ಟಿಯನ್ನು ಮಾರ್ಚ್ 23ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಇಂದಿನ ಸಭೆಯಲ್ಲಿ ಸಚಿವರುಗಳಾದ ಡಾ. ಶರಣಪ್ರಕಾಶ್ ಆರ್. ಪಾಟೀಲ, ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ರಹೀಂ ಖಾನ್ ಹಾಗೂ ಕೆಕೆಆರ್’ಡಿಬಿ ಅಧ್ಯಕ್ಷರು ಮತ್ತು ಶಾಸಕರಾದ ಡಾ. ಅಜಯ್ ಸಿಂಗ್ ಅವರು ಭಾಗವಹಿಸಿ ಕಲಬುರಗಿ ಮತ್ತು ಬೀದರಕ್ಕೆ ನಿಯಮಿತ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಒತ್ತಾಯಿಸಿದರು. @PriyankKharge @ajaydharamsingh @S_PrakashPatil @RahimKhan_MLA
M B Patil tweet mediaM B Patil tweet mediaM B Patil tweet media
ಕನ್ನಡ
4
16
116
6.3K
M B Patil
M B Patil@MBPatil·
ಬಬಲೇಶ್ವರ ಮತ ಕ್ಷೇತ್ರದ ಸಿದ್ದಾಪುರ ಗ್ರಾಮದ ರೈತ ಶ್ರೀ ಮಲ್ಲಪ್ಪ ಸಕ್ರಿ ಅವರು ಕೆರೆ ತುಂಬುವ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ 4 ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದು, ಸುಮಾರು ರೂ. 35 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ. ಅವರ ಈ ಸಾಧನೆ ಸಂತಸ ತರಿಸಿದೆ. ತಮ್ಮ ತೋಟದಲ್ಲಿ ಬೆಳೆದ ದ್ರಾಕ್ಷಿಹಣ್ಣುಗಳನ್ನು ಭಾನುವಾರ ಪ್ರೀತಿಯಿಂದ ನನಗೆ ನೀಡಿ ಕೃತಜ್ಞತೆ ಸಲ್ಲಿಸಿದರು. ಅವರ ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು. ರೈತರ ಇಂತಹ ಸಾಧನೆಗಳು ನಮಗೆ ನೀರಾವರಿ ಕ್ಷೇತ್ರದಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡುವ ಪ್ರೇರಣೆಯನ್ನು ನೀಡುತ್ತವೆ. ರೈತನ ಮುಖದಲ್ಲಿ ಮೂಡುವ ಸಂತೋಷದ ನಗು -ಅದುವೇ ನಮ್ಮ ಕೆಲಸದ ನಿಜವಾದ ಫಲ.
M B Patil tweet mediaM B Patil tweet mediaM B Patil tweet media
ಕನ್ನಡ
9
7
117
2.7K
M B Patil
M B Patil@MBPatil·
ಕೆಪಿಸಿಸಿ ಮಾಜಿ ಅಧ್ಯಕ್ಷರು, ಹಳಿಯಾಳ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಶ್ರೀ ಆರ್. ವಿ. ದೇಶಪಾಂಡೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. @RV_Deshpande
M B Patil tweet media
ಕನ್ನಡ
0
4
49
959
M B Patil
M B Patil@MBPatil·
ಪೂಜ್ಯ ಸಿದ್ದೇಶ್ವರ ಸ್ವಾಮಿಗಳವರ ಚಿಂತನೆಗಳು ರಾಜ-ಮಹಾರಾಜರ ಆದಿಯಾಗಿ ಅನೇಕರು ಭೂಮಿಗಾಗಿ ಯುದ್ದ ಮಾಡಿದ್ದಾರೆ. ಸಣ್ಣವರು ಸಣ್ಣ ಸಂಗತಿಗಳಿಗಾಗಿ ಹೋರಾಡಿದರೆ, ದೊಡ್ಡವರು ದೊಡ್ಡ ವಿಷಯಗಳಿಗಾಗಿ ಕಾದಾಡಿದ್ದಾರೆ. ಭೂಮಿ, ಮನೆ, ಅರಮನೆ—ಎಲ್ಲವೂ ಉಳಿದಿವೆ, ಅವರು ಹೊರಟು ಹೋಗಿದ್ದಾರೆ! ಇರುವಷ್ಟು ದಿನವಿದ್ದು, ಕಾಲನ ಕರೆ ಬಂದಾಗ, ತಕಾರು ಇಲ್ಲದೆ ತೆರಳಬೇಕು. ಬಡಿದಾಡುವುದು ಹಾರಾಡುವುದರಲ್ಲಿ ಅರ್ಥವಿಲ್ಲ. – ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು #siddeshwaraswamiji
ಕನ್ನಡ
0
12
72
1K