




M B Patil
19.3K posts

@MBPatil
Minister for Commerce & Industries, Infrastructure GoK | Educationist-Engineer-Basava Literature Enthusiast

























ಮಂಡ್ಯದಲ್ಲಿ ಸ್ಥಾಪನೆ ಆಗಲಿರುವ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರದ ವೈಶಿಷ್ಟ್ಯಗಳು 1. ಇದು ಸಂಪೂರ್ಣ ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆ. 2. ಮಂಡ್ಯದ ಸಂಸದರು ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ-ಉಕ್ಕು ಸಚಿವರಾದ ಶ್ರೀ @hd_kumaraswamy ಅವರು ನಿರ್ವಹಿಸುವ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದ ಸಂಸ್ಥೆ 3. ಕರ್ನಾಟಕದ ಆಟೋಮೊಬೈಲ್ ಕ್ಷೇತ್ರಕ್ಕೆ ಬೂಸ್ಟರ್ ಆಗಲಿದೆ. 4. ಆರಂಭಿಕ ಹಂತದಲ್ಲಿ ₹ 500 ಕೋಟಿ, ನಂತರ ₹ 500 ಕೋಟಿ; ಒಟ್ಟು ₹ 1,000 ಕೋಟಿಗೂ ಹೆಚ್ಚು ಹೂಡಿಕೆ. 5. ಮಂಡ್ಯ ಜಿಲ್ಲೆಗೆ ಬರುತ್ತಿರುವ ಪ್ರಪ್ರಥಮ ಕೇಂದ್ರ ಸರಕಾರಿ ಉದ್ಯಮ ಸಂಸ್ಥೆ. 6. ಇದು ಸಂಶೋಧನೆ, ಪರೀಕ್ಷಾ ಕೇಂದ್ರ ಸಕ್ಕರೆನಾಡಿಗೆ ಶ್ರೀ @narendramodi ಸರಕಾರದ ಅಕ್ಕರೆಯ ಕಾಣಿಕೆ; ವಿಸಿ ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಬಿದ್ದ ಎರಡೇ ದಿನದಲ್ಲಿ ಮಂಡ್ಯಕ್ಕೆ ಬಂದ #ARAI ತಂಡ! ನುಡಿದಂತೆ ನಡೆಯುವುದು ಎಂದರೆ ಹೀಗೆ.. #ARAI #MANDYA

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತೊಂದು ಬಲವಾದ ಹೆಜ್ಜೆ ಬೀದರ್ - ಕಲಬುರಗಿಗೆ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಸೂಚನೆ ವಿಧಾನಸೌಧದಲ್ಲಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಇಂಡಿಗೋ, ಏರ್ ಇಂಡಿಯಾ, ಅಲಯನ್ಸ್ ಏರ್, ಸ್ಟಾರ್ ಏರ್ ಹಾಗೂ ಆಕಾಶ ಏರ್ ಸಂಸ್ಥೆಗಳೊಂದಿಗೆ ನಡೆದ ಚರ್ಚೆಯಲ್ಲಿ ಕಾರ್ಯಾಚರಣೆಯ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು. 2019ರಲ್ಲಿ ಅಭಿವೃದ್ಧಿಪಡಿಸಲ್ಪಟ್ಟ 742 ಎಕರೆ ವ್ಯಾಪ್ತಿಯ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎಎಐ ನಿರ್ವಹಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿಮಾನ ಸೇವೆಗಳನ್ನು ಆರಂಭಿಸುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಬೆಂಗಳೂರು–ಕಲಬುರಗಿ ಮತ್ತು ಬೆಂಗಳೂರು–ಬೀದರ ವಿಮಾನ ಸೇವೆಗಳ ಕುರಿತು ಖಚಿತ ಪ್ರಸ್ತಾವನೆ ಹಾಗೂ ವೇಳಾಪಟ್ಟಿಯನ್ನು ಮಾರ್ಚ್ 23ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಇಂದಿನ ಸಭೆಯಲ್ಲಿ ಸಚಿವರುಗಳಾದ ಡಾ. ಶರಣಪ್ರಕಾಶ್ ಆರ್. ಪಾಟೀಲ, ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ರಹೀಂ ಖಾನ್ ಹಾಗೂ ಕೆಕೆಆರ್’ಡಿಬಿ ಅಧ್ಯಕ್ಷರು ಮತ್ತು ಶಾಸಕರಾದ ಡಾ. ಅಜಯ್ ಸಿಂಗ್ ಅವರು ಭಾಗವಹಿಸಿ ಕಲಬುರಗಿ ಮತ್ತು ಬೀದರಕ್ಕೆ ನಿಯಮಿತ ವಿಮಾನ ಸೇವೆ ಆರಂಭಿಸಲು ಏರ್ ಲೈನ್ಸ್ ಸಂಸ್ಥೆಗಳಿಗೆ ಒತ್ತಾಯಿಸಿದರು. @PriyankKharge @ajaydharamsingh @S_PrakashPatil @RahimKhan_MLA
















