somashekar bagur ಸೋಮಶೇಖರ
48.1K posts

somashekar bagur ಸೋಮಶೇಖರ
@bpsomashekar
Vision without execution is hallucination










ಲಿಂಗಾಯತ ಸಮಾಜದಲ್ಲಿ ಹುಟ್ಟಿ, ಸಮಾಜ ಸೇವೆಗಾಗಿ ಶರಣರಂತೆ ಬಾಳಿದ ಹೆಮ್ಮೆಯ ಸಕ್ಕರೆ ಕರಡೆಪ್ಪನವರು. ಬಳ್ಳಾರಿಯ ಸಕ್ಕರಿ ಸಂಗನಬಸಪ್ಪ ಮತ್ತು ಗಂಗಾಂಬೆ ಸದ್ಭಕ್ತ ದಂಪತಿಗಳು, ಶರಣ ಧರ್ಮವೇ ಮೈವೆತ್ತು ಬಂದಂತಿದ್ದ ಪರೋಪ ಕಾರವನ್ನು ಸಹಜ ಬದ ಕಿದವರು ಅವರಿಗೆ ಗಂಡು ಮಗುವಾಯಿತು; ಅದಕ್ಕೆ ಬಸವಪ್ಪನೆಂದು ಹೆಸರಿಟ್ಟರು. ಆದರೆ ಮುಂದೆ ಆತನಿಗೆ ಕರಡೆಪ್ಪನೆಂಬ ಹೆಸರು ಪ್ರಾಪ್ತವಾಗುತ್ತದೆ. ಕರಡಪ್ಪನವರಿಗೆ ಯೌವನ ಬಂತು. ನಿಂಬಗಲ್ಲಿನ ಗಂಗಾಂಬಿಕೆಯನ್ನು ಮದುವೆ ಯಾದ; ಮನೆತನದ ಕಾಯಕವಾದ ವ್ಯಾಪಾರದಲ್ಲಿ ತೊಡಗಿದನು. “ಚಿತ್ರಶುದ್ಧನಾಗಿ ಕಾಯಕ ಮಾಡುವ ಸದ್ಭಕ್ತನಿಗೆ ಎತ್ತ * ನೋಡಿದತ್ತ ಲಕ್ಷ್ಮೀ ತಾನೇ ತಾನಾಗಿಪ್ಪಳು.” ಕರಡೆಪ್ಪನ ಸಂಪತ್ತು ಬೆಳೆಯಿತು. ಸತ್ಯಶುದ್ಧ ಕಾಯಕದಲ್ಲಿ ದಾಸೋಹ ವಿರಲೇಬೇಕು. ಕರಡೆಪ್ಪ ದಾಸೋಹಿ ನಿತ್ಯ ನೂರಾರುಜನ ಆತನ ಮನೆಗೆ ಬರತೊಡಗಿದರು; ಮನೆ ಮಠವಾಯಿತು ಅನ್ನದಾನದ ಜೊತೆಗೆ ಕರಡೆಪ್ಪ ವಿದ್ಯಾದಾನಕ್ಕೂ ಮನಸ್ಸು ಮಾಡಿದನು. ಗುರುಗಳ ಆದೇಶದಂತೆ ಸಂಸ್ಕೃತ ಪಾಠಶಾಲೆ ಸ್ಥಾಪಿಸಿದನು. ಕರಡಪ್ಪನವರ ಚೌಕವೆಂದು ಈಗಲೂ ಬಳ್ಳಾರಿಯಲ್ಲಿರುವ ಸ್ಥಳದಲ್ಲಿಯೇ ಸಂಸ್ಕೃತ ಪಾಠಶಾಲೆಯಿತ್ತು ಊಟ, ವಸತಿ, ಬಟ್ಟೆ, ವಿದ್ಯೆ- ಎಲ್ಲವೂ ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ದೊರಕುತ್ತಿತ್ತು, ಒಂದು ದಿನ ಗುರು ಸಕ್ಕರಿ ಕರಡಪ್ಪನನ್ನು ಕರೆದು "ನಮ್ಮ ಇಹಲೋಕ ಮಣಿಹ ಮುಗಿಯಿತು. ನಿನಗಿನ್ನು ನಾನಾ ರೀತಿಯ ಕಷ್ಟಗಳು ಬರುವವು; ಧೀರನಾಗಿ ಬಾಳು" ಎಂದು ಹೇಳಿ ಕೆಲದಿನಗಳಲ್ಲಿ ಐಕ್ಯನಾದನು. ಕರಡೆಪ್ಪನಿಗೆ ಒಂದರ ಮೇಲೊಂದು ಕಷ್ಟಗಳು ಬರತೊಡ ಗಿದುವು, ಮಡದಿ ಗಂಗಾಂಬಿಕೆ ಲಿಂಗೈಕ್ಯಳಾದಳು. ಕರಡಪ್ಪ ಮತ್ತೊಂದು ಮದುವೆಯಾದನು ಕಾಡಿ ನೋಡುವ ಶಿವ ನಿಗೇನು? ಇನ್ನೊಬ್ಬ ಮಗ ಕೊನೆಯುಸಿರೆಳೆದನು, ವ್ಯಾಪಾರದಲ್ಲಿ ಅಪಾರ ಹಾನಿಯಾಯಿತು. ಒಮ್ಮಿಂದೊಮ್ಮಿಗೆ ಸರಕಾರಕ್ಕೆ ಲಕ್ಷ ಹಣ ಕಟ್ಟಬೇಕೆಂದು ಆಜ್ಞೆ ಬಂದಿತು; ಕೈಯಲ್ಲಿ ಹಣವಿಲ್ಲ ಶಿವೇಚ್ಛೆಯೆಂದು ಗುರುವನ್ನು ಸ್ಮರಿಸಿದನು ಬೆಳಗಾಗು ವುದರೊಳಗಾಗಿ ಹಣ ಕಟ್ಟಬೇಕಾಗಿಲ್ಲವೆಂದು ಸರಕಾರದಿಂದ ಮತ್ತೊಂದು ಆಜ್ಞೆ ಬಂತು ಶಿವನು ಭಕ್ತರೊಡನೆ ಕಾಲುಕೆದರಿ ಜಗಳ ತಗೆಯುತ್ತಾನೆ; ತರಕಟ ಕಾಡಿ ನೋಡುತ್ತಾನೆ ಆದರೆ. ಕೊನೆಗೆ ತಾನೇ ಸೋಲುತ್ತಾನೆ; ಸೋತು ಸಂತೋಷ ಪಡು ತ್ತಾನೆ: ಭಕ್ತನನ್ನು ತನಗಿಂತ ಅಧಿಕನೆನಿಸುತ್ತಾನೆ. ರಾಕ್ಷಸ ಸಂವತ್ಸರ ಕಾಲಿಟ್ಟಿತು; ಭೀಕರ ಬರಬಿತ್ತು ದೂರ ದೂರದಿಂದ ಜನ ಸಕ್ಕರಿ ಕರಡೆಪ್ಪನ ಹೆಸರು ಕೇಳಿ ಬರತೊಡ ಗಿತು, ಬಂದವರಿಗೆಲ್ಲ ದಾಸೋಹಕ್ಕೆ ಅಣಿಮಾಡಿದನು ಕೈಯಲ್ಲಿದ್ದ ಹಣ, ಮನೆಯಲ್ಲಿದ್ದ ಸಂಪತ್ತು ಎಲ್ಲವೂ ವೆಚ್ಚವಾಯಿತು ಆಗ ಜನ ಆತನ ನೆರವಿಗೆ ಬಂದರು, ಬರಗಾಲ ಮುಗಿಯುವ ವರೆಗೆ ಅನ್ನ ಸಂತರ್ಪಣೆ ನಡೆಯಿತು. ತನ್ನ ಸಂಪತ್ತೆಲ್ಲ ಬರಗಾಲ ಪೀಡಿತ ಬಂಧುಗಳಿಗೆ ವಿನಿಯೋಗವಾಯಿತೆಂದು ಕರಡೆಪ್ಪ ಹಿಗ್ಗಿದನು. ಶಿವನ ಸೊಮ್ಮು ಶಿವನಿಗೆ ಸಲ್ಲಿತೆಂದು ಹೆಮ್ಮೆಪಟ್ಟನು. ಗುರು ಮರಿಸ್ವಾಮಿ ಆದೇಶವಿತ್ತಿದ್ದಂತೆ ಭಸ್ಮ ಮತ್ತು ಲಿಂಗಗಳ ಒಂದು ಕಣಜವನ್ನು ಮಠದಲ್ಲಿ ಕಟ್ಟಿಸಿದನು. ೧೭೯೭ ಯುವ ಸಂವತ್ಸರ ಕಾರ್ತಿಕ ಶುದ್ಧ ದ್ವಾದಶಿಯಂದು ಲಿಂಗದಲ್ಲಿ ಲಿಂಗವಾದನು.


Your weather app runs on models built for London and New York. Indian thunderstorms are 2-3km wide, last under an hour and form where no model predicted. The same GFS that nails London rain 3 days out struggles with Pune rain 3 hours out. I built MausamNow to fix this. 5 models, live radar, satellite tracking, locality-level answers. Works across 38 radar stations in India. Try it: mausamnow.com How it works: abhijitvaidya.substack.com/p/your-weather… #Weather #India #Monsoon #Pune #Punerains

The recent and sudden announcement by the #Karnataka government to do away with the marks system for third language subjects in #SSLC board exams and shifting to grading system has received mixed reactions. #KarnatakaNews ow.ly/RsZY50YEhRh









